ಬಾಹುಬಲಿ ಮಹಾಮಸ್ತಾಭಿಷೇಕ: ರೈಲ್ವೇ ಇಲಾಖೆಯಿಂದ ಹೆಚ್ಚುವರಿ ರೈಲು, ಹಲವು ವ್ಯವಸ್ಥೆ

Published : Feb 12, 2018, 09:32 PM ISTUpdated : Apr 11, 2018, 01:05 PM IST
ಬಾಹುಬಲಿ ಮಹಾಮಸ್ತಾಭಿಷೇಕ: ರೈಲ್ವೇ ಇಲಾಖೆಯಿಂದ ಹೆಚ್ಚುವರಿ ರೈಲು, ಹಲವು ವ್ಯವಸ್ಥೆ

ಸಾರಾಂಶ

ಯಶವಂತಪುರ - ಶ್ರವಣಬೆಳಗೊಳ, ಶ್ರವಣಬೆಳಗೊಳ - ಹಾಸನಕ್ಕೆ ಹೆಚ್ಚುವರಿ ರೈಲು, ಮೀರಜ್‌ನಿಂದ ಹಾಸನಕ್ಕೆ ವಿಶೇಷ ರೈಲು  ವ್ಯವಸ್ಥೆ ಮಾಡಲಾಗಿದ್ದು ಫೆ.26ರವರೆಗೂ ರೈಲುಗಳು ಸಂಚರಿಸಲಿವೆ.

ಬೆಂಗಳೂರು(ಫೆ.12): ಶ್ರವಣ ಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಾಭಿಷೇಕ ಹಿನ್ನಲೆಯಲ್ಲಿ ಪ್ರಯಾಣಿಕರು, ಪ್ರವಾಸಿಗರು, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರೈಲ್ವೇ ಇಲಾಖೆ ಹೆಚ್ಚುವರಿ ರೈಲುಗಳು ಸೇರಿದಂತೆ ಹಲವು ವ್ಯವಸ್ಥೆ  ಮಾಡಲಾಗಿದೆ.

ಯಶವಂತಪುರ - ಶ್ರವಣಬೆಳಗೊಳ, ಶ್ರವಣಬೆಳಗೊಳ - ಹಾಸನಕ್ಕೆ ಹೆಚ್ಚುವರಿ ರೈಲು, ಮೀರಜ್‌ನಿಂದ ಹಾಸನಕ್ಕೆ ವಿಶೇಷ ರೈಲು  ವ್ಯವಸ್ಥೆ ಮಾಡಲಾಗಿದ್ದು ಫೆ.26ರವರೆಗೂ ರೈಲುಗಳು ಸಂಚರಿಸಲಿವೆ. ಶ್ರವಣಬೆಳಗೊಳದಲ್ಲಿ 8 ವಿಶೇಷ ಟಿಕೆಟ್ ಕೌಂಟರ್‌ಗಳನ್ನು ತೆರೆಯಲಾಗಿದ್ದು ಸಂಗೊಳ್ಳಿ ರಾಯಣ್ಣ ನಿಲ್ದಾಣ, ಯಶವಂತಪುರ, ಶ್ರವಣಬೆಳಗೊಳದಲ್ಲಿ ಮಾಹಿತಿ ಫಲಕಗಳ ಅಳವಡಿಸಲಾಗಿದೆ.  

ಶ್ರವಣಬೆಳಗೊಳದಲ್ಲಿ 2 ಸಾವಿರ ಜನರು ಕೂರುವ ಶೆಲ್ಟರ್, ನಿಲ್ದಾಣದಲ್ಲಿ ಹೆಚ್ಚುವರಿ ಶೌಚಾಲಯಗಳು, ವಿಕಲಾಂಗರಿಗೆ ವೀಲ್ಹ್ ಚೇರ್, ರೈಲ್ವೆ ನಿಲ್ದಾಣಕ್ಕೆ ಬರುವ ವಾಹನಗಳಿಗೆ ಪಾರ್ಕಿಂಗ್,ಹೆಚ್ಚಿನ ಭದ್ರತಾ ಸಿಬ್ಬಂದಿ, ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ, ಮೆಡಿಕಲ್ ವ್ಯವಸ್ಥೆ ಸೇರಿದಂತೆ ಪ್ರಯಾಣಿಕರಿಗೆ ಹಲವು ಅನುಕೂಲ ಕಲ್ಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿ ಮಹಾಯುತಿಗೆ ಕ್ಲೀನ್ ಸ್ವೀಪ್ ಗೆಲುವು, ಕೇರಳ ಗೆದ್ದಾಗ ಪ್ರಜಾಪ್ರಭುತ್ವ ಮಹಾರಾಷ್ಟ್ರ ಸೋತಾಗ ಕೊತ ಕೊತ
ಉಡುದಾರ, ಶಿವನ ಟಿ ಶರ್ಟ್ ಧರಿಸಿದ ಕಾರಣ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಮೇಲೆ ಭೀಕರ ದಾಳಿ