ಫಕೀರ ಮೋದಿಯಲ್ಲ ಎಂದ ಮಾಯಾವತಿ

Published : Dec 06, 2016, 04:42 PM ISTUpdated : Apr 11, 2018, 12:41 PM IST
ಫಕೀರ ಮೋದಿಯಲ್ಲ ಎಂದ ಮಾಯಾವತಿ

ಸಾರಾಂಶ

‘‘ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ಫಕೀರ ಎಂದು ಕರೆದಿದ್ದಾರೆ. ಆದರೆ, ಅವರು ಫಕೀರರಲ್ಲ, ಅವರೇನೂ ನಿರ್ಗತಿಕರಾಗಿಲ್ಲ, ಆದರೆ ಮೋದಿ ನಿರ್ಧಾರ ದೇಶದ ಶೇಕಡಾ 90ರಷ್ಟು ಜನರನ್ನು ಫಕೀರರನ್ನಾಗಿಸಿದೆ,’’

ನವದೆಹಲಿ(ಡಿ.06): ‘‘ಪ್ರಧಾನಿ ಮೋದಿ ಅವರ ನೋಟು ಅಮಾನ್ಯ ನಿರ್ಧಾರದಿಂದ ದೇಶದ ಶೇಕಡಾ 90ರಷ್ಟು ಮಂದಿ ಫಕೀರ (ಬಡವ)ರಾಗಿದ್ದಾರೆಯೇ ವಿನಾ ಮೋದಿಯವರು ಫಕೀರರಾಗಿಲ್ಲ,’’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಟೀಕಿಸಿದ್ದಾರೆ.

ಡಾ. ಬಿ ಆರ್ ಅಂಬೇಡ್ಕರ್‌'ರವರ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘‘ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ಫಕೀರ ಎಂದು ಕರೆದಿದ್ದಾರೆ. ಆದರೆ, ಅವರು ಫಕೀರರಲ್ಲ, ಅವರೇನೂ ನಿರ್ಗತಿಕರಾಗಿಲ್ಲ, ಆದರೆ ಮೋದಿ ನಿರ್ಧಾರ ದೇಶದ ಶೇಕಡಾ 90ರಷ್ಟು ಜನರನ್ನು ಫಕೀರರನ್ನಾಗಿಸಿದೆ,’’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘‘ಮಾಯಾವತಿ ಈ ಹೇಳಿಕೆ ರಾಜಕೀಯ ಪ್ರೇರಿತ. ಬಿಎಸ್‌ಪಿ ಭ್ರಷ್ಟಾಚಾರದ ಆರೋಪ ಹೊತ್ತ ಪಕ್ಷ. ಮಾಯಾವತಿ ಅವರೂ ದಲಿತರು ಹಾಗೂ ಬಡವರ ಹೆಸರಲ್ಲಿ ಅಕ್ರಮವಾಗಿ ಹಣ ಗಳಿಕೆ ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ,’’ ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್ ರೀತಿಯಲ್ಲೇ ಮತ್ತೊಂದು ಉಗ್ರ ಕೃತ್ಯ, ಗುಂಡಿನ ದಾಳಿಯಲ್ಲಿ 10 ಸಾವು, ಹಲವರು ಗಂಭೀರ
ಐಟಿ ಪಾರ್ಕ್ ಗುತ್ತಿಗೆ 30 ವರ್ಷ, ವಿಸ್ತರಣೆಗೂ ಅವಕಾಶ: ಸಚಿವ ಪ್ರಿಯಾಂಕ್‌ ಖರ್ಗೆ