
ನವದೆಹಲಿ(ಸೆ.04): ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಧೈರ್ಯವಾಗಿ ನಿಂತು ವಿಷಯಾಧಾರಿತ ಚರ್ಚೆ ಮಾಡಬಲ್ಲ ನಾಯಕರ ಅವಶ್ಯಕತೆ ಇದೆ ಎಂದು ಬಿಜೆಪಿ ಹಿರಿಯ ನಾಯಕ ಮುರುಳು ಮನೋಹರ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿಗೆ ನಿಧನರಾದ ಕಾಂಗ್ರೆಸ್ ಹಿರಿಯ ನಾಯಕ ಜೈಪಾಲ್ ರೆಡ್ಡಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಜೋಷಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಘಟನಾವಳಿಗಳ ಕುರಿತು ಪಕ್ಷ ರಾಜಕಾರಣ ಮೀರಿದ ಚರ್ಚೆ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.
ದೇಶಕ್ಕೆ ಪ್ರಧಾನಿ ಎದುರಿಗೆ ನಿಂತು ಅವರನ್ನು ಟೀಕಿಸುವ ಧೈರ್ಯವುಳ್ಳ ನಾಯಕನ ಅವಶ್ಯಕತೆ ಇದ್ದು, ಇಂತಹ ಮಾತುಗಳಿಂದ ಪ್ರಧಾನಿ ಸಂತುಷ್ಟರಾಗುತ್ತಾರೋ, ಕೋಪಗೊಳ್ಳುತ್ತಾರೋ ಎಂಬುದರ ಕುರಿತು ಚಿಂತಿಸದೇ ಧೈರ್ಯವಾಗಿ ಮಾತನಾಡುವ ನಾಯಕನ ಅವಶ್ಯಕತೆ ಇದೆ ಎಂದು ಜೋಷಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.