ರಾಜ್ಯ ರಾಜಕೀಯದಲ್ಲಿ ವಿಚಿತ್ರ ಬೆಳವಣಿಗೆ, ಕ್ಷೇತ್ರ ಬಿಡಲು ಕ್ಯೂನಲ್ಲಿ ನಿಂತಿದ್ದಾರೆ ಶಾಸಕರು!: ಕಾರಣವೇನು ಗೊತ್ತಾ?

Published : Sep 22, 2017, 07:58 AM ISTUpdated : Apr 11, 2018, 12:38 PM IST
ರಾಜ್ಯ ರಾಜಕೀಯದಲ್ಲಿ ವಿಚಿತ್ರ ಬೆಳವಣಿಗೆ, ಕ್ಷೇತ್ರ ಬಿಡಲು ಕ್ಯೂನಲ್ಲಿ ನಿಂತಿದ್ದಾರೆ ಶಾಸಕರು!: ಕಾರಣವೇನು ಗೊತ್ತಾ?

ಸಾರಾಂಶ

ಸಾಮಾನ್ಯವಾಗಿ ಎಲೆಕ್ಷನ್​ ಬಂದ್ರೆ ಸಾಕು ನಾಯಕರು ಟಿಕೆಟ್​ಗಾಗಿ ಕಿತ್ತಾಡೋದು ಕಾಮನ್.​ ಆದ್ರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಆಗ್ತಿರೋದೆ ಬೇರೆ.ಯಾಕಂದ್ರೆ ಬಿಜೆಪಿ ನಾಯಕರು ಸ್ಪರ್ಧೆಗೆ ಟಿಕೆಟ್​ಗಿರಲಿ, ತಮ್ಮ ಕ್ಷೇತ್ರವನ್ನೂ ಸಹ ಬಿಟ್ಟು ಕೊಡೋಕೆ ಮುಂದಾಗಿದ್ದಾರೆ. ಏಕೆ ಅಂತೀರಾ  ಈ ವರದಿ ನೋಡಿ.

ಬಾಗಲಕೋಟೆ(ಸೆ.22): ಸಾಮಾನ್ಯವಾಗಿ ಎಲೆಕ್ಷನ್​ ಬಂದ್ರೆ ಸಾಕು ನಾಯಕರು ಟಿಕೆಟ್​ಗಾಗಿ ಕಿತ್ತಾಡೋದು ಕಾಮನ್.​ ಆದ್ರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಆಗ್ತಿರೋದೆ ಬೇರೆ.ಯಾಕಂದ್ರೆ ಬಿಜೆಪಿ ನಾಯಕರು ಸ್ಪರ್ಧೆಗೆ ಟಿಕೆಟ್​ಗಿರಲಿ, ತಮ್ಮ ಕ್ಷೇತ್ರವನ್ನೂ ಸಹ ಬಿಟ್ಟು ಕೊಡೋಕೆ ಮುಂದಾಗಿದ್ದಾರೆ. ಏಕೆ ಅಂತೀರಾ  ಈ ವರದಿ ನೋಡಿ.

ಇಂಥಾ ಒಂದು ವಿಚಿತ್ರ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ ಬಾಗಲಕೋಟೆ ಜಿಲ್ಲೆ. ಇದಕ್ಕೆ ಕಾರಣ ಮಾಜಿ ಸಿಎಂಗಳು ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದು .

ಯಾವಾಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ಆದೇಶ ನೀಡಿದ್ರೋ, ಆಗ್ಲೇ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಶಾಸಕರು ನಾ ಮುಂದು ತಾ ಮುಂದು ಅಂತ ಪೈಪೋಟಿಗೆ ನಿಂತು ಕ್ಷೇತ್ರ ತೊರೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಬಾಗಲಕೋಟೆ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ, ಶ್ರೀಕಾಂತ ಕುಲಕರ್ಣಿ, ದೊಡ್ಡನಗೌಡ ಪಾಟೀಲ,  ಸಿದ್ದು ಸವದಿ ಸೇರಿದಂತೆ ಎಲ್ಲಾ ಮಾಜಿ ಶಾಸಕರು ಯಡಿಯೂರಪ್ಪನವರನ್ನ ತಮ್ಮ ಕ್ಷೇತ್ರಕ್ಕೆ ಕರೆತರೋಕೆ ಗಂಭೀರ ಯತ್ನ ನಡೆಸಿದ್ದಾರೆ.

ಜೆಡಿಎಸ್​ನಲ್ಲೂ ಪೈಪೋಟಿ ಶುರು

ಇತ್ತ ಜಿಲ್ಲೆಯ ಜೆಡಿಎಸ್​ ನಾಯಕರು ತಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನ ಬಾಗಲಕೋಟೆ ಜಿಲ್ಲೆಯಿಂದ ಸ್ಪರ್ಧೆ ಮಾಡಿಕೊಳ್ಳುವಂತೆ ಮನವಿ ಮಾಡಲು ಮುಂದಾಗಿದ್ದಾರೆ. 

ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಕ್ಷೇತ್ರದಾನ ರಾಜಕೀಯ ಶುರುವಾಗಿದೆ. ಈ ರಾಜಕೀಯ ಬೆಳವಣಿಗೆ ಯಾವ ದಿಕ್ಕಿನತ್ತ ಹೊರಳುತ್ತೆ ಅನ್ನೋದನ್ನು ಕಾದು ನೋಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
India News Live: ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ