
ಬೆಂಗಳೂರು(ಜ.19): ಖಾಕಿಗಳ ಮೇಲೆ ಖಾದಿಗಳ ದರ್ಪ ಇನ್ನೂ ನಿಂತಿಲ್ಲ. ಮೊನ್ನೆ ಶಾಸಕ ಕೃಷ್ಣಪ್ಪ ಸಾರ್ವಜನಿಕವಾಗಿಯೇ, ಪೊಲೀಸ್ ಅಧಿಕಾರಿಗಳನ್ನು ಮನಸೋ ಇಚ್ಚೆ ನಿಂದಿಸಿದ್ದರು. ಆ ಘಟನೆಯ ಬೆನ್ನಲ್ಲೇ, ಇದೀಗ, ಮಾಗಡಿ ಶಾಸಕ ಬಾಲಕೃಷ್ಣ, ತಮ್ಮ ದರ್ಪ ಪ್ರದರ್ಶಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ನಡೆದ ಹಲ್ಲೆ ವಿಚಾರಕ್ಕೆ ಸಂಬಂಧಿಸಿ ಕಳೆದ 15 ರಂದು ತಮ್ಮ ಬೆಂಬಲಿಗರೊಂದಿಗೆ ಕುದೂರು ಠಾಣೆಗೆ ಬಂದಿದ್ದರು. ಕೂದೂರಿನ ಅಯ್ಯಂಡಹಳ್ಳಿಯಲ್ಲಿ, ದೇವಸ್ಥಾನದಲ್ಲಿ ಹೂವಿನ ಹಾರ ಹಾಕುವ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಂಗಸ್ವಾಮಿ ಮತ್ತು ಬಾಲಕೃಷ್ಣ ಬೆಂಬಲಿಗ ರಮೇಶ್ ನಡುವೆ ಮಾರಾಮಾರಿ ನಡೆದಿತ್ತು. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ದವೂ ದೂರು ದಾಖಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತನ ಬಂಧನ ಯಾಕೆ ನಡೆದಿಲ್ಲ ಅಂಥಾ, ಪ್ರಶ್ನಿಸಿಲು ಬಂದ ಶಾಸಕ ಬಾಲಕೃಷ್ಣ, ತನ್ನ ಸಬ್ಯತೆಯನ್ನ ಪ್ರದರ್ಶಿಸಿದ್ದಾನೆ..!
ಠಾಣೆಯಲ್ಲಿದ್ದ ಸಬ್ಇನ್ಸ್ಪೆಕ್ಟರ್ ಹರೀಶ್ ಮತ್ತು ಇನ್ಸಪೇಕ್ಟರ್ ನಂದೀಶ್ ಮೇಲೆ ವಾಮಾಗೋಚರ ನಿಂದಿಸಿದ್ದಾರೆ. ಒಬ್ಬ ಶಾಸಕನ ಬಾಯಿಯಲ್ಲಿ ಬರುವ ಮಾತುಗಳಾ..? ಅವು ಅಂಥಾ ಕೂಡಾ, ಅನ್ನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.