ನಾನು ಹೇಳಿದ್ದನ್ನು ಎಡಿಟ್ ಮಾಡದೇ ತೋರಿಸಿ ಎಂದ ವಿನಯ್ ಕುಲಕರ್ಣಿ; ಅಷ್ಟಕ್ಕೂ ಸಚಿವರು ಹೇಳಿದ್ದೇನು..? ಇಲ್ಲಿದೆ ನೋಡಿ

Published : Nov 24, 2017, 12:55 PM ISTUpdated : Apr 11, 2018, 12:47 PM IST
ನಾನು ಹೇಳಿದ್ದನ್ನು ಎಡಿಟ್ ಮಾಡದೇ ತೋರಿಸಿ ಎಂದ ವಿನಯ್ ಕುಲಕರ್ಣಿ; ಅಷ್ಟಕ್ಕೂ ಸಚಿವರು ಹೇಳಿದ್ದೇನು..? ಇಲ್ಲಿದೆ ನೋಡಿ

ಸಾರಾಂಶ

ನನ್ನ ಪರ ಸಮರ್ಥನೆ ಮಾಡಿಕೊಳ್ಳಲು ನಿಮ್ಮ ಚಾನೆಲ್​ ಅವಕಾಶ ಕೊಡ್ತಿಲ್ಲ ಎಂದು ಆರೋಪಿಸಿರುವ  ಸಚಿವರು,  ನಿಮ್ಮ ಚಾನೆಲ್​'ಗೆ ನಾನು ಬರೋದಿಲ್ಲ, ನನಗೆ ನಿಮ್ಮ ಚಾನೆಲ್​ ಬೇಕಾಗಿಲ್ಲ.  ನಿಮ್ಮ ಚಾನೆಲ್'​ಗೆ ತಾಕತ್ತಿದ್ದರೆ ನಾನು ಹೇಳಿದ್ದನ್ನು ಕಟ್​ ಮಾಡದೇ ತೋರಿಸಿ ಎಂದು  ಸುವರ್ಣ ಸೌಧದಲ್ಲಿ  ಸಚಿವರು ಸವಾಲು ಹಾಕಿದ್ದಾರೆ. ಸವಾಲಿನಂತೆ ಸುವರ್ಣ ನ್ಯೂಸ್'ನಲ್ಲಿ ಸಚಿವರು ಹೇಳಿದ್ದನ್ನೆಲ್ಲ ಎಡಿಟ್​ ಮಾಡದೇ ತೋರಿಸುತ್ತಿದ್ದೇವೆ.

ಬೆಳಗಾವಿ (ನ.24): ಯೋಗೀಶ್  ಗೌಡ   ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕುಲಕರ್ಣಿ ಪ್ರತಿಕ್ರಿಯಿಸಿದ್ದು  ನಿಮ್ಮ ಚಾನೆಲ್'ಗೆ ತಾಕತ್ ಇದ್ದರೆ ನಾನು ಹೇಳಿದ್ದನ್ನು ಕಟ್ ಮಾಡದೇ ತೋರಿಸಿ ಎಂದು ಸುವರ್ಣ ನ್ಯೂಸ್'ಗೆ  ಸವಾಲ್ ಹಾಕಿದ್ದಾರೆ. ಮಿನಿಸ್ಟರ್ &ಮರ್ಡರ್ ಹೆಸರಿನಲ್ಲಿ ಸುವರ್ಣ ನ್ಯೂಸ್ ನಿನ್ನೆ  ಪ್ರಕರಣದ ಕುರಿತಂತೆ ದಿನವಿಡಿ ವರದಿ ಪ್ರಸಾರ ಮಾಡಿತ್ತು.

ಇದೇ ವೇಳೆ  ಯೋಗೀಶ್ ಗೌಡ ಹತ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿರುವ ಸಚಿವರು, ವಕೀಲನಿಗೆ ಬೆದರಿಕೆ ಹಾಕಿದ ಆಡಿಯೋದಲ್ಲಿರುವುದು ನನ್ನ ಧ್ವನಿ ಅಲ್ಲ. ಗುರುನಾಥಗೌಡ, ಯೋಗೇಶ್​ ಗೌಡ ರೌಡಿಗಳು. ಅವರ ವಿರುದ್ಧ ಎಷ್ಟು ಕೇಸ್​ಗಳಿವೆ ಗೊತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. 

ನನ್ನ ಪರ ಸಮರ್ಥನೆ ಮಾಡಿಕೊಳ್ಳಲು ನಿಮ್ಮ ಚಾನೆಲ್​ ಅವಕಾಶ ಕೊಡ್ತಿಲ್ಲ ಎಂದು ಆರೋಪಿಸಿರುವ  ಸಚಿವರು,  ನಿಮ್ಮ ಚಾನೆಲ್​'ಗೆ ನಾನು ಬರೋದಿಲ್ಲ, ನನಗೆ ನಿಮ್ಮ ಚಾನೆಲ್​ ಬೇಕಾಗಿಲ್ಲ.  ನಿಮ್ಮ ಚಾನೆಲ್'​ಗೆ ತಾಕತ್ತಿದ್ದರೆ ನಾನು ಹೇಳಿದ್ದನ್ನು ಕಟ್​ ಮಾಡದೇ ತೋರಿಸಿ ಎಂದು  ಸುವರ್ಣ ಸೌಧದಲ್ಲಿ  ಸಚಿವರು ಸವಾಲು ಹಾಕಿದ್ದಾರೆ. ಸವಾಲಿನಂತೆ ಸುವರ್ಣ ನ್ಯೂಸ್'ನಲ್ಲಿ ಸಚಿವರು ಹೇಳಿದ್ದನ್ನೆಲ್ಲ ಎಡಿಟ್​ ಮಾಡದೇ ತೋರಿಸುತ್ತಿದ್ದೇವೆ.

ವಿನಯ್ ಕುಲಕರ್ಣಿ ಮಾತುಗಳು ನಿಮ್ಮ ಮುಂದೆ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಖ್ಯಾತ ಎಲೆಕ್ಟ್ರಿಕ್‌ ಸ್ಕೂಟರ್‌ಅನ್ನು ಈಗಲೇ ಖರೀದಿಸಿ, ಜನವರಿ 1 ರಿಂದ ಇದರ ಬೆಲೆ ಆಗಲಿದೆ ದುಬಾರಿ!
ಲಂಡನ್ ಬೀದಿಗಳಲ್ಲಿ ಗುಟ್ಕಾ ಕಲೆ; 'ಬಾಯಲ್ಲಿ ಕೇಸರಿ' ಹೇಳಿದ ಭಾರತೀಯರ ವಿಡಿಯೋ ವೈರಲ್ ಮಾಡಿ ಅವಮಾನಿಸಿದ ಪತ್ರಕರ್ತೆ!