
ಬೆಂಗಳೂರು(ಅ.16): ಹಲವು ವರ್ಷಗಳ ಬಳಿಕ ಸಚಿವೆ ಉಮಾಶ್ರೀ ಇಂದು ಬಣ್ಣ ಹಚ್ಚಿದ್ದರು. ಬೆಂಗಳೂರಿನಲ್ಲಿ ಇಂದು ಬಿ. ಜಯಮ್ಮ ಜನ್ಮಶತಮಾನೋತ್ಸವ ಸಮಾರೋಪ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸದಾರಮೆ ನಾಟಕ ಪ್ರದರ್ಶನದಲ್ಲಿ ಸದಾರಮೆ ಪಾತ್ರವನ್ನು ಸಚಿವೆ ಉಮಾಶ್ರೀ ನಿರ್ವಹಿಸಿದರು.
ಬಿ. ಜಯಮ್ಮ ಅವರು ನಿರ್ವಹಿಸಿದ ಸದಾರಮೆ ಪಾತ್ರಕ್ಕೆ ಯಶಸ್ವಿಯಾಗಿ ಜೀವ ತುಂಬಿದ ಉಮಾಶ್ರೀ , ಕಳ್ಳನ ಪಾತ್ರ ಮಾಡಿದ ಹಿರಿಯ ಕಲಾವಿದೆ ಬಿ. ಜಯಶ್ರೀ ಜೊತೆ ಮನೋಜ್ಞ ಅಭಿನಯ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.