ಹೃದಯದಲ್ಲಿಲ್ಲ ಖಾರ: ಸುಷ್ಮಾ ಅಗಲಿಕೆಗೆ ಪುಟ್ಟ ಕಂದನಂತೆ ಅತ್ತ MDH ತಾತ!

Published : Aug 07, 2019, 03:16 PM ISTUpdated : Aug 07, 2019, 03:27 PM IST
ಹೃದಯದಲ್ಲಿಲ್ಲ ಖಾರ: ಸುಷ್ಮಾ ಅಗಲಿಕೆಗೆ ಪುಟ್ಟ ಕಂದನಂತೆ ಅತ್ತ MDH ತಾತ!

ಸಾರಾಂಶ

ಸುಷ್ಮಾ ಅಗಲುವಿಕೆಯಿಂದ ಮಡುಗಟ್ಟಿದ ದುಃಖ| ಮಾಜಿ ವಿದೇಶಾಂಗ ಅಚಿವೆಗೆ ಅಂತಿಮ ನಮನ ಸಲ್ಲಿಸಲು ಹರಿದು ಬಂತು ಜನಸಾಗರ| ಜನ ಮೆಚ್ಚಿದ ನಾಯಕಿಗೆ ಅಂತಿಮ ನಮನ ಸಲ್ಲಿಸಿ ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ MDH ತಾತ

ನವದೆಹಲಿ[ಆ.07]: ಮಾಜಿ ವಿದೇಶಾಂಗ ಸಚಿವೆ, ಮಮತಾಮಯಿ ಸುಷ್ಮಾ ಸ್ವರಾಜ್ ನಿನ್ನೆ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇವರ ಅಗಲುವಿಕೆ ಬಿಜೆಪಿ ಪಕ್ಷ ಹಾಗೂ ಭಾರತೀಯರಿಗೆ ತುಂಬಲಾರದ ನಷ್ಟವುಂಟು ಮಾಡಿದೆ. ಪ್ರಧಾನಿ ಮೋದಿ, ಅಡ್ವಾಣಿ ಸೇರಿದಂತೆ ಹಲವಾರು ಗಣ್ಯರು ಸುಷ್ಮಾ ಅಂತಿಮ ದರ್ಶನ ಪಡೆದಿದ್ದಾರೆ. ಸದ್ಯ MDH ಸಂಸ್ಥೆಯ ಸಿಇಒ 96 ವರ್ಷದ ಮಹಾಶಯ್ ಧರಂಪಾಲ್ ಗುಲಾಟಿ ಸುಷ್ಮಾ ಪಾರ್ಥೀವ ಶರೀರದೆದುರು ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಎಲ್ಲರನ್ನೂ ಭಾವುಕರನ್ನಾಗಿಸಿದೆ. 

ಇಂದು ಬುಧವಾರ ಮಧ್ಯಾಹ್ನ 12ರಿಂದ ನವದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಸುಷ್ಮಾ ಪಾರ್ಥೀವ ಶರೀರದ ಅಂತಿಮ ದರ್ಶನ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ವಿದೇಶಾಂಗ ಸಚಿವೆಗೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದ MDH ತಾತ, ಮಹಾಶಯ್ ಧರಂಪಾಲ್ ಗುಲಾಟಿ ಗದ್ಗದಿತರಾಗಿದ್ದಾರೆ. ತಾಯಿಯನ್ನು ಕಳೆದುಕೊಂಡ ಮಗುವಿನಂತೆ ಸುಷ್ಮಾ ಮೃತದೇಹದೆದುರು ಕುಸಿದು ಕುಳಿತು ಕಂಬನಿ ಮಿಡಿದಿದ್ದಾರೆ. ಈ ವಿಡಿಯೋ ನೋಡುಗರನ್ನೂ ಭಾವುಕರನ್ನಾಗಿಸಿದೆ.

ಇನ್ನು ಸುಷ್ಮಾ ಅಂತಿಮ ದರ್ಶನ ಪಡೆಯಲು ಬಂದಿದ್ದ ಬಿಜೆಪಿ ಹಿರಿಯ ನಾಯಕ ಎಲ್. ಕೆ ಅಡ್ವಾಣಿ ಕೂಡಾ ಭಾವುಕರಾಗಿ ಕಂಬನಿ ಮಿಡಿದಿದ್ದಾರೆ. ಸುಷ್ಮಾ ಸ್ವರಾಜ್ ನಿಧನದಿಂದ ಬಿಜೆಪಿ ವಲಯದಲ್ಲಿ ಶೋಕ ಮಡುಗಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !