
ಮೈಸೂರು : ಸಿಎಂ ಆಪ್ತನೋರ್ವ ದುಡ್ಡಿನ ದರ್ಪ ತೋರಿದ ಪ್ರಕರಣವೊಂದು ಬೆಳಕಿದೆ ಬಂದಿದೆ. ಸಿಎಂ ಮನೆಯಲ್ಲಿರುವ ಆಪ್ತ ಮರಿಸ್ವಾಮಿ, ಸಿಎಂ ನೋಡಲು ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ ಜನರ ಎದುರು ತಮ್ಮ ದರ್ಪ ಪ್ರದರ್ಶನ ಮಾಡಿದ್ದಾರೆ. ತಮ್ಮ ಕಷ್ಟಗಳನ್ನು ಹೇಳಿಕೊಂಡ ಜನರ ಬಳಿ ಮನಬಂದಂತೆ ಮಾತನಾಡಿದ್ದಾರೆ.
ಮರಿಸ್ವಾಮಿ ವರ್ತನೆಗೆ ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ರಾಮಕೃಷ್ಣಾ ನಗರದಲ್ಲಿರುವ ಸಿಎಂ ನಿವಾಸದ ಬಳಿಯಲ್ಲಿ ಈ ಘಟನೆ ನಡೆದಿದೆ. ಸಿಎಂ ನಿವಾಸದ ಬಳಿ ತಿಂಡಿ ಮಾಡಬೇಕು ಎಂದ ಜನರ ಬಳಿ, ತಿಂದು ಬರಲು ಆಗುವುದಿಲ್ಲವೇ ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ.
2 ಸಾವಿರ ನೋಟುಗಳನ್ನು ತೋರಿಸುತ್ತಾ ಒಂದೇ ನೋಟು ಕೊಡುವುದು ಎಂದಿದ್ದಾರೆ. ಈ ವೇಳೆ ಹಳ್ಳಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೊಟ್ಟಷ್ಟು ದುಡ್ಡು ತೆಗೆದುಕೊಳ್ಳಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ನಿಮ್ಮನ್ನು ಇಲ್ಲಿಗೆ ಬರಲು ಹೇಳಿದ್ದು ಯಾರು, ಇಲ್ಲಿಯವರೆಗೆ ಯಾಕೆ ಬಂದಿರಿ ಎಂದಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.