
ಮಂಗಳೂರು(ಡಿ.26): ಇಲ್ಲಿನ ಆಟೋ ಚಾಲಕರು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡಲು ಹೊರಟಿದ್ದಾರೆ. ಕ್ಯಾಶ್ ಇಲ್ಲದೆ ಆಟೋ ಪ್ರಯಾಣ ಮಾಡುವಂತಿಲ್ಲ ಎನ್ನುವವರಿಗೆ ಕುಡ್ಲ ಸೌಹಾರ್ದ ಸಂಘದ ಮೂಲಕ ಆಟೋ ಚಾಲಕರು ಉದಾಹರಣೆ. ಇದು ಮಂಗಳೂರಿನ ಆಟೋ ಸರ್ವಿಸ್. ಇಲ್ಲಿ 200ಕ್ಕೂ ಹೆಚ್ಚು ಆಟೋಗಳು ಪೇಟಿಎಂ ಮಾಡಿಕೊಂಡಿವೆ. ಪ್ರಧಾನಿ ಮೋದಿಯ ಡಿಜಿಟಲ್ ಇಂಡಿಯಾ ಕನಸು ನನಸು ಮಾಡುವ ಯೋಜನೆಗೆ ಕೈ ಜೋಡಿಸಿದ್ದಾರೆ.
ಚಲೋ ಕುಡ್ಲ ಅನ್ನೋ ಌಪ್ ಮೂಲಕ ಆಟೋ ಚಾಲಕರು ಗ್ರಾಹಕರನ್ನು ಆಕರ್ಷಿಸಲು ಹೊರಟಿದ್ದಾರೆ. ಐ ಸರ್ಚ್ ಮಾನಿಟರಿಂಗ್ ಕಂಪನಿ ಆಟೋ ಚಾಲಕರಿಗೆ ತರಬೇತಿ ಮತ್ತು ತಂತ್ರಜ್ಞಾನ ಒದಗಿಸಿದೆ. ಕೇವಲ ವ್ಯವಹಾರಕ್ಕಷ್ಟೇ ಅಲ್ಲ, ಗ್ರಾಹಕರನ್ನು ಸೆಳೆಯುವುದರ ಜೊತೆಗೆ, ಇತರರಿಗೂ ಜಾಗೃತಿ ಮೂಡಿಸುತ್ತಿದ್ದಾರೆ ಈ ಚಾಲಕರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.