ಕಳೆದ ಮೂರುವರೆ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜ್ಯೋತಿ ಎಂಬವರ ಮೇಲೆ ನಡೆದ ATM ಹಲ್ಲೆ ಪ್ರಕರಣ ದೇಶದಾದ್ಯಂತ ಚರ್ಚೆಗೀಡಾಗಿತ್ತು. ಜನರನ್ನು ಬೆಚ್ಚಿ ಬೀಳಿಸಿದ್ದ ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಹಲ್ಲೆ ನಡೆಸಿದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ ಎಂಬ ವದಂತಿ ಹರಿದಾಡಲಾರಂಭಿಸಿದೆ.
ಬೆಂಗಳೂರು(ಫೆ.04): ಕಳೆದ ಮೂರುವರೆ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜ್ಯೋತಿ ಎಂಬವರ ಮೇಲೆ ನಡೆದ ATM ಹಲ್ಲೆ ಪ್ರಕರಣ ದೇಶದಾದ್ಯಂತ ಚರ್ಚೆಗೀಡಾಗಿತ್ತು. ಜನರನ್ನು ಬೆಚ್ಚಿ ಬೀಳಿಸಿದ್ದ ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಹಲ್ಲೆ ನಡೆಸಿದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ ಎಂಬ ವದಂತಿ ಹರಿದಾಡಲಾರಂಭಿಸಿದೆ.
ಆಂಧ್ರದ ಮದನಪಲ್ಲಿಯಲ್ಲಿ ಈ ಎಟಿಎಂ ರಾಕ್ಷಸ ಸಿಕ್ಕಿಬಿದ್ದಿದ್ದಾನಂತೆ. ಆದರೆ ಸಿಕ್ಕಿಬಿದ್ದ ವ್ಯಕ್ತಿ ಅಂದು ಹಲ್ಲೆ ನಡೆಸಿದಾತನಾ ಅಥವಾ ಅಮಾಯಕನಾ ಎಂಬುವುದು ತಿಳಿಯಬೇಕಷ್ಟೇ.
ಕಳೆದ ಮೂರುವರೆ ವರ್ಷಗಳ ಹಿಂದೆ ಬೆಂಗಳೂರಿಬನ ಎಟಿಎಂ ಒಂದರಲ್ಲಿ ಜ್ಯೋತಿ ಎಂಬಾಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಅಳವಡಿಸಿದ್ದ ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯಗಳು ಸೆರೆಯಾಗಿದ್ದವು. ಈ ಘಟನೆ ಜನರಲ್ಲೂ ಭೀತಿ ಮೂಡಿಸಿತ್ತು. ಆದರೆ ಘಟನೆ ನಡೆದು ವರ್ಷಗಳೇ ಕಳೆದರೂ ಈತನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ.