ಬಿರಿಯಾನಿ ದುಡ್ಡು ಕೇಳಿದ್ದಕ್ಕೇ ಮಾಲೀಕನಿಗೆ ಗುಂಡಿಟ್ಟರು..!

Published : Jun 05, 2018, 02:48 PM IST
ಬಿರಿಯಾನಿ ದುಡ್ಡು ಕೇಳಿದ್ದಕ್ಕೇ ಮಾಲೀಕನಿಗೆ ಗುಂಡಿಟ್ಟರು..!

ಸಾರಾಂಶ

‘ಅನ್ನದಾತಾ ಸುಖಿಭವ’ ಎಂಬುದು ನಮ್ಮ ಸಂಸ್ಕೃತಿಯ ಲಕ್ಷಣ. ಹೊಟ್ಟೆ ತುಂಬ ಊಟ ಕೊಟ್ಟವನಿಗೆ ಹರಿಸುವ ಪರಿ ಇದು. ಆದರೆ ಹೊಟ್ಟೆ ತುಂಬಾ ಚಿಕನ್ ಬಿರಿಯಾನಿ ತಿಂದು ದುಡ್ಡು ಕೊಡಿ ಅಂದಿದ್ದಕ್ಕೆ ಅಂಗಡಿ ಮಾಲೀಕನನ್ನು ಗ್ರಾಹಕರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. 

ಕೋಲ್ಕತ್ತಾ(ಜೂ.5): ‘ಅನ್ನದಾತಾ ಸುಖಿಭವ’ ಎಂಬುದು ನಮ್ಮ ಸಂಸ್ಕೃತಿಯ ಲಕ್ಷಣ. ಹೊಟ್ಟೆ ತುಂಬ ಊಟ ಕೊಟ್ಟವನಿಗೆ ಹರಿಸುವ ಪರಿ ಇದು. ಆದರೆ ಹೊಟ್ಟೆ ತುಂಬಾ ಚಿಕನ್ ಬಿರಿಯಾನಿ ತಿಂದು ದುಡ್ಡು ಕೊಡಿ ಅಂದಿದ್ದಕ್ಕೆ ಅಂಗಡಿ ಮಾಲೀಕನನ್ನು ಗ್ರಾಹಕರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. 

ನಾಲ್ವರು ಗ್ರಾಹಕರು ಬಿರಿಯಾನಿ ತಿನ್ನಲ್ಲು ಹೊಟೇಲ್ ಒಂದಕ್ಕೆ ಬಂದಿದ್ದಾರೆ. ಪ್ಲೇಟ್ ಒಂದಕ್ಕೆ 190 ರುಪಾಯಿ ಕೊಡಿ ಅಂದಿದ್ದಕ್ಕೆ ಮಾಲೀಕನ ಮೇಲೆ ನಾಲ್ವರು ಜಗಳಕ್ಕೆ ನಿಂತಿದ್ದಾರೆ. ಜಗಳ ತಾರಕಕ್ಕೇರಿದ್ದು ಈ ವೇಳೆ ನಾಲ್ವರಲ್ಲಿ ಒಬ್ಬ ಗನ್ ತೆಗೆದು ಗುಂಡು ಹಾರಿಸಿದ್ದಾನೆ. ಮಾಲೀಕ ಸ್ಥಳದಲ್ಲೇ ಮೃತಪಟ್ಟಿದ್ದನ್ನು ನೋಡಿ ಎಲ್ಲರೂ ಪರಾರಿಯಾಗಿದ್ದಾರೆ. 

ಮೃತ ಅಂಗಡಿ ಮಾಲೀಕನನ್ನು ಸಂಜಯ್ ಮೊಂಡಲ್ ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಶಂಕಿತರ ಪೈಕಿ ಓರ್ವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಇನ್ನುಳಿದವರಿಗಾಗಿ ಶೋಧ ನಡೆಸಿದ್ದಾರೆ. ಘಟನೆ ವೇಳೆ ಫಿರೋಜ್ ಜತೆ ರಾಜಾ, ಮೊಗ್ರಿ ಮತ್ತು ಸಲ್ಮಾನ್ ಇದ್ದರು ಎಂದು ಪೊಲೀಸರು ಮಾಹಿತಿ ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಖ್ಯಾತ ನಟ, ಎಂಪಿ, ಕೋಟಿ ಕೋಟಿ ಇದ್ರೂ, ತಳ್ಳೋ ಗಾಡೀಲಿ ಊಟ ಸವಿದ ಜಗ್ಗೇಶ್!
ಯಶ್ ಸೋಲಿಸ್ತಾರಾ ರಣವೀರ್.. ಬ್ಲಾಕ್ ಬಸ್ಟರ್ 'KGF 2' ಬೀಟ್ ಮಾಡಲಿದ್ಯಾ ರಣವೀರ್ "ಧುರಂಧರ್..?