ಸೈಕಲ್'ನಲ್ಲಿ ಬರುತ್ತಿದ್ದ ಪತಿಗೆ ಪತ್ನಿ ಕಾರು ಡಿಕ್ಕಿ, ಪತಿ ಸಾವು!

Published : May 01, 2017, 04:47 AM ISTUpdated : Apr 11, 2018, 01:07 PM IST
ಸೈಕಲ್'ನಲ್ಲಿ ಬರುತ್ತಿದ್ದ ಪತಿಗೆ ಪತ್ನಿ ಕಾರು ಡಿಕ್ಕಿ, ಪತಿ ಸಾವು!

ಸಾರಾಂಶ

ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡ ಪತ್ನಿ ರಶ್ಮಿ ಮುಂದೆ ಚಲಿಸುತ್ತಿದ್ದ ತಮ್ಮ ಪತಿಯ ಸೈಕಲ್‌ಗೆ ಡಿಕ್ಕಿ ಹೊಡೆದೇ ಬಿಟ್ಟರು. ಸೈಕಲ್‌'ನಿಂದ ಕೆಳಕ್ಕೆ ಅಪ್ಪಳಿಸಿದ ಅಶೋಕ್‌ ಅವರ ತಲೆ ರಭಸವಾಗಿ ರಸ್ತೆಗೆ ಹೊಡೆಯಿತು.

ಇಡುಕ್ಕಿ: ಬೇಸಿಗೆ ರಜೆ ಪ್ರಯುಕ್ತ ಮುನ್ನಾರ್‌'ಗೆ ತೆರಳಿದ್ದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ದುರ್ದೈವವೆಂದರೆ, ರಸ್ತೆಯಲ್ಲಿ ಸೈಕಲ್‌ನಲ್ಲಿ ಚಲಿಸುತ್ತಿದ್ದ ಪತಿಗೆ, ಪತ್ನಿಯ ಕಾರು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. 

ಸೈಕ್ಲಿಂಗ್‌'ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಕೇರಳ ಮೂಲದ ಅಶೋಕ್‌ ಸುಕುಮಾರನ್‌ ನಾಯರ್‌, ಬೇಸಿಗೆ ರಜೆ ಪ್ರಯುಕ್ತ ಕುಟುಂಬ ಸಮೇತರಾಗಿ ಮುನ್ನಾರ್‌'ಗೆ ತೆರಳಿದ್ದರು. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಅಶೋಕ್‌ ಸೈಕ್ಲಿಂಗ್‌ ಮಾಡುತ್ತಿದ್ದರು. ಇದೇ ವೇಳೆ, ಅವರ ಪತ್ನಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾರು ನಡೆಸುತ್ತಿದ್ದರು. ಈ ವೇಳೆ, ಸ್ಟೀರಿಯೊ ಸಿಸ್ಟಮ್‌'ನ ಧ್ವನಿ ಸರಿಪಡಿಸುವಲ್ಲಿ ಅಶೋಕ್‌ ಅವರ ಪತ್ನಿ ಮುಂದಾದರು. ಆದರೆ, ಈ ಸಂದರ್ಭದಲ್ಲಿ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡ ಪತ್ನಿ ರಶ್ಮಿ ಮುಂದೆ ಚಲಿಸುತ್ತಿದ್ದ ತಮ್ಮ ಪತಿಯ ಸೈಕಲ್‌ಗೆ ಡಿಕ್ಕಿ ಹೊಡೆದೇ ಬಿಟ್ಟರು. ಸೈಕಲ್‌'ನಿಂದ ಕೆಳಕ್ಕೆ ಅಪ್ಪಳಿಸಿದ ಅಶೋಕ್‌ ಅವರ ತಲೆ ರಭಸವಾಗಿ ರಸ್ತೆಗೆ ಹೊಡೆಯಿತು. ತಕ್ಷಣವೇ ರಶ್ಮಿ ತಮ್ಮ ಪತಿಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ