ಬಿಎಂಟಿಸಿ ಬಸ್‌ನಲ್ಲಿ ಕೂದಲು ಕಳ್ಳರಿದ್ದಾರೆ : ಯುವತಿಯರೇ ಎಚ್ಚರ!

Published : Oct 20, 2018, 07:41 AM IST
ಬಿಎಂಟಿಸಿ ಬಸ್‌ನಲ್ಲಿ ಕೂದಲು ಕಳ್ಳರಿದ್ದಾರೆ : ಯುವತಿಯರೇ ಎಚ್ಚರ!

ಸಾರಾಂಶ

ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ಯುವತಿಯರೇ ನೀವು ಎಚ್ಚರಿಕೆ ವಹಿಸುವುದು ಅಗತ್ಯ ಯಾಕೆಂದರೆ ಇಲ್ಲಿದ್ದಾರೆ ಕೂದಲು ಕಳ್ಳರು. 

ಬೆಂಗಳೂರು :  ಬಿಎಂಟಿಸಿ ಬಸ್‌ನಲ್ಲಿ ಯುವತಿಯ ಕೂದಲಿಗೆ ಕತ್ತರಿ ಹಾಕಿದ ಕಿಡಿಗೇಡಿಯೊಬ್ಬನಿಗೆ ಸಹ ಪ್ರಯಾಣಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಹೋಟೆಲ್‌ ನೌಕರ ರಾಜು ಎಂಬಾತನೇ ಈ ಕೃತ್ಯ ಎಸಗಿದ್ದು, ತನ್ನ ಸಂಬಂಧಿ ಜತೆ ಬಸ್‌ನಲ್ಲಿ ಬುಧವಾರ ಮಧ್ಯಾಹ್ನ ಸಂತ್ರಸ್ತೆ ಕತ್ರಿಗುಪ್ಪೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್‌ನ ಯುವತಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ರಾಜು, ಆಕೆಗೆ ಗೊತ್ತಾದಂತೆ ಕತ್ತರಿಯಿಂದ ಆಕೆ ಕೂದಲು ಕತ್ತರಿಸಿದ್ದಾನೆ. ಈ ಕೃತ್ಯವನ್ನು ನೋಡಿದ ಸಂತ್ರಸ್ತೆ ಸಂಬಂಧಿ, ತಕ್ಷಣವೇ ಬಸ್‌ ಚಾಲಕ ಹಾಗೂ ಕಂಡಕ್ಟರ್‌ಗೆ ವಿಷಯ ತಿಳಿಸಿದ್ದಾರೆ. ಬಳಿಕ ಈ ವಿಚಾರ ತಿಳಿದ ಸಹ ಪ್ರಯಾಣಿಕರೆಲ್ಲ ಸೇರಿಕೊಂಡು ರಾಜುಗೆ ಧರ್ಮದೇಟು ನೀಡಿ ಹನುಮಂತನಗರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ಅಲ್ಲದೆ ಈ ಗಲಾಟೆ ವಿಷಯ ತಿಳಿದು ಠಾಣೆಗೆ ಬಂದ ರಾಜು ಭಾವಿ ಪತ್ನಿ ಸಹ, ರಾಜು ಕಪಾಳಕ್ಕೆ ಬಾರಿಸಿದ್ದರು. ಹಣಕ್ಕಾಗಿ ಕೂದಲು ಕತ್ತರಿಗೆ ಹಾಕಿದ್ದೆ ಎಂದು ರಾಜು ಹೇಳಿಕೆ ಕೊಟ್ಟಿದ್ದಾನೆ. ಮುಂದಿನ ತಿಂಗಳು ನನ್ನ ಮದುವೆ ಇದೆ. ಹೀಗಾಗಿ ಈ ಬಗ್ಗೆ ದೂರು ಕೊಟ್ಟು ಠಾಣೆಗೆ ಅಲೆಯಲು ನನಗೆ ಇಷ್ಟವಿಲ್ಲ ಎಂದು ಹೇಳಿದ ಯುವತಿ, ಘಟನೆ ಸಂಬಂಧ ದೂರು ಕೊಡಲು ನಿರಾಕರಿಸಿದರು. ಹಾಗಾಗಿ ನಾವು ಸಾಮಾನ್ಯ ಪ್ರಕರಣವೆಂದು ಪರಿಗಣಿಸಿ ರಾಜುಗೆ ಮತ್ತೆ ಈ ರೀತಿ ಕೃತ್ಯ ಎಸಗದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದೇವು ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?