ಬಳ್ಳಾರಿಯ ಶಂಕಿತ ಉಗ್ರ ಅರೆಸ್ಟ್

Published : Dec 11, 2018, 07:25 AM IST
ಬಳ್ಳಾರಿಯ ಶಂಕಿತ ಉಗ್ರ ಅರೆಸ್ಟ್

ಸಾರಾಂಶ

ಬಳ್ಳಾರಿ ಮೂಲಕ ಶಂಕಿತ ಖಲಿಸ್ತಾನಿ ಉಗ್ರನೋರ್ವನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರದ ದಳದ ಸಿಬ್ಬಂದಿ ಬಂಧಿಸಿದ್ದಾರೆ. 

ಮುಂಬೈ :  ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರದ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಶಂಕಿತ ಖಲಿಸ್ತಾನ ಉಗ್ರಗಾಮಿ ಬಂಧಿಸಲಾಗಿದೆ. ಈ ಪೈಕಿ ಓರ್ವನನ್ನು ಕರ್ನಾಟಕದ ಹರ್‌ಪಾಲ್‌ಸಿಂಗ್‌ ನಗ್ರಾ (42) ಎಂದು ಗುರುತಿಸಲಾಗಿದೆ. ಈತ ಮೂಲತಃ ಪಂಜಾಬ್‌ನವನಾದರೂ ಹಾಲಿ ಬಳ್ಳಾರಿ ವಾಸಿ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನಗ್ರಾನನ್ನು ಪುಣೆ ಜಿಲ್ಲೆಯ ಚಕಾನ್‌ನಲ್ಲಿ ಎಟಿಎಸ್‌ ಸಿಬ್ಬಂದಿ ಡಿಸೆಂಬರ್‌ 2ರಂದೇ ಬಂಧಿಸಿದ್ದಾರೆ. ಈತ ನೀಡಿದ ಸುಳಿವಿನ ಮೇರೆಗೆ ಮತ್ತೋರ್ವನನ್ನು ಪಂಜಾಬ್‌ನಲ್ಲಿ ಸೆರೆಹಿಡಿಯಲಾಗಿದೆ. ಇವರು ಉಗ್ರ ಸಂಘಟನೆಯ ಬೆಂಬಲಿಗರಾಗಿದ್ದು, ಪಾಕಿಸ್ತಾನದಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಜತೆ ಸಂಪರ್ಕದಲ್ಲಿದ್ದರು ಎಂದು ಗೊತ್ತಾಗಿದೆ. ಬಂಧಿತರಿಂದ ಪಿಸ್ತೂಲ್‌ ಮತ್ತು 5 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗ್ರಾನನ್ನು ವಿಚಾರಣೆಗೆ ಒಳಪಡಿದ ಸಂದರ್ಭದಲ್ಲಿ ಈತ, ಸ್ವತಂತ್ರ ಖಲಿಸ್ತಾನ ದೇಶ ಸ್ಥಾಪನೆ ಆಗಬೇಕು ಎಂಬ ಹೋರಾಟದ ಬೆಂಬಲಿಗನಾಗಿದ್ದ. ಇದಕ್ಕಾಗಿ ಅಂತರ್ಜಾಲದ ಮೂಲಕ ಶಸ್ತ್ರಾಸ್ತ್ರ ಕ್ರೋಡೀಕರಿಸುತ್ತಿದ್ದರು ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಖಲಿಸ್ತಾನಿ ತೀವ್ರವಾದಿತ್ವದ ಕಡೆಗೆ ಸೆಳೆಯುತ್ತಿದ್ದರು ಎಂದು ತಿಳಿದುಬಂದಿದೆ.

ಎರಡನೇ ಶಂಕಿತ ಉಗ್ರನನ್ನು ಈತನ ಸುಳಿವಿನ ಮೇರೆಗೆ ಬಂಧಿಸಿ ಈಗ ಮುಂಬೈಗೆ ಕರೆತರಲಾಗುತ್ತಿದೆ ಎಂದು ಎಟಿಎಸ್‌ ಮೂಲಗಳು ಹೇಳಿವೆಯಾದರೂ, ಆತನ ಹೆಸರು ಬಹಿರಂಗಪಡಿಸಲು ನಿರಾಕರಿಸಿವೆ.

ಎಟಿಎಸ್‌ ತಂಡವು ನಗ್ರಾ ವಿರುದ್ಧ ಅಕ್ರಮ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್‌ 20ರ ಪ್ರಕಾರ (ಒಂದು ಉಗ್ರಗಾಮಿ ತಂಡದ ಸದಸ್ಯನಾಗಿದ್ದ ಹಿನ್ನೆಲೆ) ಪ್ರಕರಣ ದಾಖಲಿಸಿದೆ.  ಮುಂಬೈ ಕೋರ್ಟ್‌ಗೆ ನಗ್ರಾನನ್ನು ಸೋಮವಾರ ಹಾಜರು ಮಾಡಲಾಗಿದ್ದು, ಡಿ.17ರವರೆಗೆ ಎಟಿಎಸ್‌ ವಶಕ್ಕೆ ಒಪ್ಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!