ನಿನ್ನ ಕಾಟದಿಂದ ಫೇಲ್ ಆದೆ, ಈಗ ನೀನೇ ಫೀಸ್ ಕಟ್ಟು: ಹಠ ಹಿಡಿದ ಪ್ರಿಯಕರ!

Published : May 11, 2019, 04:31 PM IST
ನಿನ್ನ ಕಾಟದಿಂದ ಫೇಲ್ ಆದೆ, ಈಗ ನೀನೇ ಫೀಸ್ ಕಟ್ಟು: ಹಠ ಹಿಡಿದ ಪ್ರಿಯಕರ!

ಸಾರಾಂಶ

ಪ್ರೀತಿಯಲ್ಲಿ ಬಿದ್ದ ಮೆಡಿಕಲ್ ವಿದ್ಯಾರ್ಥಿ| ಫೇಲ್ ಆಗಿದ್ದೇ ತಡ ಪ್ರಿಯತಮೆಯೂ ದೂರ| ಪ್ರಿಯತಮೆಯ ವರ್ತನೆ ಕಂಡು ನೀನೇ ನನ್ನ ಫೀಸ್ ಕಟ್ಟು ಎಂದು ಹಠ ಹಿಡಿದ ಪ್ರಿಯಕರ|

ಮಹಾರಾಷ್ಟ್ರ[ಮೇ.11]: ವೈದ್ಯಕೀಯ ಶಿಕ್ಷಣದಲ್ಲಿ ವ್ಯಾಸಂಗ ನಡೆಸುತ್ತಿದ್ದ ವಿದ್ಯರ್ಥಿಯೊಬ್ಬ ತಾನು ಫೇಲ್ ಆಗಲು ನೀನೇ ಕಾರಣ ಎಂದು ತನ್ನ ಪ್ರಿಯತಮೆಯನ್ನೇ ಹೊಣೆಗಾರಳನ್ನಾಗಿಸಿದ್ದಾನೆ. ಅಲ್ಲದೇ ನೀನೇ ಫೀಸ್ ಕಟ್ಟು ಎಂದು ಹಠ ಹಿಡಿದಿದ್ದಾನೆ. ಸದ್ಯ ಈ ಭೂಪ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು ಹೋಮಿಯೋಪಥಿ ಮತ್ತು ಸರ್ಜರಿಯಲ್ಲಿ ಮೊದಲ ವರ್ಷದ ವ್ಯಾಸಂಗ ನಡೆಸುತ್ತಿದ್ದ ಔರಂಗಾಬಾದ್‌ ನ ಬೀಡ್ ಜಿಲ್ಲೆಯ 21 ವರ್ಷದ ಪ್ರತಿಭಾವಂತ ವಿದ್ಯಾರ್ಥಿ ಸದ್ಯ ಫೇಲ್ ಆಗಿದ್ದಾನೆ. ಈ ಮೂಲಕ ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಲು ಅನರ್ಹಗೊಂಡಿದ್ದಾನೆ. ಇದರಿಂದ ಬೇಸತ್ತ ಯುವಕ 'ನಾನು ಅನುತ್ತೀರ್ಣಗೊಳ್ಳಲು ನನ್ನ ಪ್ರಿಯತಮೆಯೇ ಕಾರಣ' ಎಂದು ಆರೋಪಿಸಿದ್ದಾನೆ. ಆಕೆಯೇ ತನಗೆ ಓದಲು ಸಮಯ ಕೊಡದೆ, ಪಾಸಾಗದಂತೆ ಅಡ್ಡಿಪಡಿಸಿದ್ದಾಳೆ, ಹೀಗಾಗಿ ಈಗ ಅವಳೇ ಪ್ರಥಮ ವರ್ಷದ ಶುಲ್ಕ ಭರಿಸಲಿ ಎಂದು ಹಠ ಹಿಡಿದಿದ್ದಾನೆ.

ಇನ್ನು ಆತ ಪ್ರೀತಿಸುತ್ತಿದ್ದ ಯುವತಿ ಆತನ ಸಹಪಾಠಿಯಾಗಿದ್ದು, ಯುವಕ ಫೇಲಾದ ಬಳಿಕ ಬಹಳಷ್ಟು ಅಂತರ ಕಾಯ್ದುಕೊಂಡಿದ್ದಾಳೆ. ಆಕೆಯನ್ನು ಒಲಿಸಲು ಆತ ಅದೆಷ್ಟೇ ಯತ್ನಿಸಿದರೂ ಪ್ರಯೋಜನವಾಗಿಲ್ಲ. ಕರೆ ಮಾಡಿ ಮಾತನಾಡಲೂ ಯತ್ನಿಸಿದ್ದಾನೆ. ಆದರೆ ಯುವತಿ ಇದ್ಯಾವುದನ್ನೂ ಲೆಕ್ಕಿಸದಾಗ ಸಾಮಾಝಿಕ ಜಾಲತಾಣವನ್ನು ದುರುಪಯೋಗಪಡಿಸಲಾರಂಭಿಸಿದ್ದಾನೆ ಹಾಗೂ ಯುವತಿಯ ಹೆತ್ತವರ ಕುರಿತಾಗಿ ಕೆಟ್ಟದಾಗಿ ಬರೆಯಲಾರಂಭಿಸಿದ್ದಾನೆ.

ಇಷ್ಟೇ ಅಲ್ಲದೇ 'ನನ್ನ ಪ್ರಥಮ ವರ್ಷದ ಶುಲ್ಕ ನೀನೇ ಭರಿಸಬೇಕು. ಇಲ್ಲವಾದಲ್ಲಿ ನಿನ್ನ ಖಾಸಗಿ ಪೋಟೋಗಳನ್ನು ಲೀಕ್ ಮಾಡುವುದಾಗಿಯೂ ಯುವತಿಗೆ ಬೆದರಿಕೆಯೊಡ್ಡಿದ್ದಾನೆ' ಇದರಿಂದ ಬೆಚ್ಚಿ ಬಿದ್ದ ಯುವತಿ ಪೊಲೀಸ್ ಠಾಣೆ  ಮೆಟ್ಟಿಲೇರಿದ್ದು, ಸದ್ಯ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ