
ಭೋಪಾಲ್[ಜು. 24] ಇಬ್ಬರು ಬಿಜೆಪಿ ಶಾಸಕರು ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ಸಿಎಂ ಕಮಲ್ ನಾಥ್ ಬೆಂಬಲಿಸಿ ವೋಟ್ ಮಾಡಿದ್ದಾರೆ.
ನಾವು ಬಿಜೆಪಿಯನ್ನು ಇಷ್ಟಪಡದ ಸ್ಥಿತಿ ನಿರ್ಮಾಣವಾಗಿದ್ದು ಮಹಾಘಟಬಂಧನ ಸೇರಲಿದ್ದೇವೆ ಎಂದು ಬಿಜೆಪಿ ಶಾಸಕರಾದ ನಾರಾಯಣ ತ್ರಿಪಾಠಿ, ಶರದ್ ಕೌಲ್ ಹೇಳಿದ್ದು ಮಧ್ಯಪ್ರದೇಶಲ್ಲಿ ಅಧಿಕಾರ ಹಿಡಿಯುವ ಕನಸಿನಲ್ಲಿದ್ದ ಬಿಜೆಪಿಗೆ ದೊಡ್ಡ ಆಘಾತವಾಗಿದೆ.
ಕರ್ನಾಟಕ ರಾಜಕಾರಣದ ಗೊಂದಲಗಳು: ಆರಂಭದಿಂದ ಅಂತ್ಯದವರೆಗೆ
ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ಸಿಗ ಸುರೇಶ್ ಚೌರಿ ಅವರನ್ನು ಇಬ್ಬರು ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡದಿದ್ದರೂ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಮಂಡಿಸಿದ ಬಿಲ್ ಪರವಾಗಿ ಇಬ್ಬರು ಶಾಸಕರು ವೋಟ್ ಮಾಡಿ ಬಿಜೆಪಿಗೆ ಶಾಕ್ ನೀಡಿದ್ದಾರೆ.
ವಿಶ್ವಾಸಮತಕ್ಕೆ ಗೈರಾಗಿದ್ದ ಕೈ ಶಾಸಕನಿಗೆ ಬಿಗ್ ರಿಲೀಫ್, ಕೇಸು ಖುಲಾಸೆ
ಕ್ರಿಮನಿಲ್ ಲಾ ಮಸೂದೆಯನ್ನು ಕಮಲ್ ನಾಥ್ ಸರ್ಕಾರ ಮಂಡನೆ ಮಾಡಿತ್ತು. 230 ಬಲದ ವಿಧಾನಸಭೆಯಲ್ಲಿ ಮಸೂದೆ ಪರ 122 ಮತಗಳು ಬಂದಿದ್ದವು. ಕಾಂಗ್ರೆಸ್ ಸ್ಪೀಕರ್ ಅವರನ್ನು ಸೇರಿ 121 ಶಾಸಕರ ಬಲ ಹೊಂದಿದೆ. ಸ್ಪೀಕರ್ ವೋಟ್ ಮಾಡದಿದ್ದರೂ ಮಸೂದೆ ಪರವಾಗಿ 122 ಮತಗಳು ಬಂದಿದ್ದವು.
ಹಿಂದೆ ಕಾಂಗ್ರೆಸ್ ನಲ್ಲಿಯೇ ಇದ್ದ ಶಾಸಕರು ಇದೀಗ ಘರ್ ವಾಪಸಿ ಮಾಡುತ್ತಿದ್ದಾರೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆ ಬಲಾಬಲ 230
ಕಾಂಗ್ರೆಸ್ - 114
ಬಿಎಸ್ಪಿ- 2
ಎಸ್ಪಿ- 1
ಸ್ವತಂತ್ರ-4
ಬಿಜೆಪಿ 106
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.