5ನೇ ದಿನಕ್ಕೆ ಕಾಲಿಟ್ಟಿರುವ ಲಾರಿ ಮುಷ್ಕರ;ಮಾಲೀಕರ ಹಗ್ಗಜಗ್ಗಾಟದಲ್ಲಿ ಜನ ಸುಸ್ತು

Published : Apr 04, 2017, 03:52 PM ISTUpdated : Apr 11, 2018, 12:37 PM IST
5ನೇ ದಿನಕ್ಕೆ ಕಾಲಿಟ್ಟಿರುವ ಲಾರಿ ಮುಷ್ಕರ;ಮಾಲೀಕರ ಹಗ್ಗಜಗ್ಗಾಟದಲ್ಲಿ ಜನ ಸುಸ್ತು

ಸಾರಾಂಶ

ವಿಮಾ ಕಂತಿನ ಮೇಲೆ ವಿಧಿಸಿರುವ ದರ ಹಾಗೂ  ಹಲವು ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿರೋ ಲಾರಿ ಮಾಲಿಕರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯಷ್ಟೆ ನಡೆದಿರುವ ಐಆರ್​ಡಿಎ ಸಂಧಾನ ಸಭೆಯೂ ವಿಫಲಗೊಂಡಿದ್ದು, ಮುಷ್ಕರ ಮತ್ತೆ ತೀವ್ರಗೊಂಡಿದೆ. ನಾಳೆಯಿಂದ ಪೆಟ್ರೋಲ್, ಡೀಸೆಲ್ ಟ್ಯಾಂಕರ್​ಗಳು ಮುಷ್ಕರಕ್ಕೆ ಕೈ ಜೋಡಿಸಲಿದ್ದು, ಮತ್ತಷ್ಟು ಸಮಸ್ಯೆ ತಲೆದೋರಲಿದೆ.

ಬೆಂಗಳೂರು (ಏ.04): ವಿಮಾ ಕಂತಿನ ಮೇಲೆ ವಿಧಿಸಿರುವ ದರ ಹಾಗೂ  ಹಲವು ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿರೋ ಲಾರಿ ಮಾಲಿಕರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯಷ್ಟೆ ನಡೆದಿರುವ ಐಆರ್​ಡಿಎ ಸಂಧಾನ ಸಭೆಯೂ ವಿಫಲಗೊಂಡಿದ್ದು, ಮುಷ್ಕರ ಮತ್ತೆ ತೀವ್ರಗೊಂಡಿದೆ. ನಾಳೆಯಿಂದ ಪೆಟ್ರೋಲ್, ಡೀಸೆಲ್ ಟ್ಯಾಂಕರ್​ಗಳು ಮುಷ್ಕರಕ್ಕೆ ಕೈ ಜೋಡಿಸಲಿದ್ದು, ಮತ್ತಷ್ಟು ಸಮಸ್ಯೆ ತಲೆದೋರಲಿದೆ.

ಲಾರಿ ಮಾಲೀಕರ ಅನಿರ್ಧಿಷ್ಟಾವಧಿ ಮುಷ್ಕರ ತೀವ್ರಗೊಂಡಿದ್ದು ಐದನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದಲ್ಲಿ ರಾಜ್ಯಾದ್ಯಂತ ಏಳು ಲಕ್ಷಕ್ಕೂ ಹೆಚ್ಚು ಲಾರಿಗಳು ಭಾಗಿಯಾಗಿದ್ದು, ಅಗತ್ಯ ವಸ್ತುಗಳ ಸಾಗಣೆಯೂ ಸ್ಥಗಿತಗೊಂಡಿದೆ. 26 ಲಕ್ಷ ವಾಣಿಜ್ಯ ವಾಹನಗಳು  ಸೇವೆ ಸ್ಥಗಿತಗೊಳಿಸಿವೆ. ನಿನ್ನೆಯಷ್ಟೆ ಐಆರ್​ಡಿಎ ಜೊತೆ ಲಾರಿ ಮಾಲಿಕರ ಸಂಘದ ಸಂಧಾನಸಭೆ ವಿಫಲಗೊಂಡಿದೆ. ಹೀಗಾಗಿ ನಾಳೆಯಿಂದ ಪೆಟ್ರೋಲ್, ಡೀಸೆಲ್ ಟ್ಯಾಂಕರ್​ಗಳು ಮುಷ್ಕರಕ್ಕೆ ಕೈ ಜೋಡಿಸಲಿದ್ದು ಮತ್ತಷ್ಟು ಸಮಸ್ಯೆ ಉಲ್ಬಣಿಸಲಿದೆ.

ಇನ್ನು ಮೂರು ದಿನ ಕಾಲಾವಕಾಶ ನೀಡ್ತೇವೆ. ಬಳಿಕ ನಡು ರಸ್ತೆಯಲ್ಲೆ ಲಾರಿ ನಿಲ್ಲಿಸುತ್ತೇವೆ. ಈಗಾಗಲೆ ಏಳು ಸಾವಿರದ ನೂರು ಕೋಟಿ ನಷ್ಟವಾಗಿದ್ದು, ಏಪ್ರಿಲ್ 8 ರಿಂದ   ಅಖಿಲ ಭಾರತ ಲಾರಿ ಮಾಲಿಕರ ಸಂಘ ಕೂಡ ಮುಷ್ಕರಕ್ಕೆ ಕೈ ಜೋಡಿಸಲಿದೆ ಎಂದು ಲಾರೀ ಮಾಲಿಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.

 ಒಂದೆಡೆ ಬರ, ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆ ಮುಷ್ಕರದಿಂದಾಗಿ ರೈತರ ಬೆಳೆಗೆ ಸೂಕ್ತ ಬೆಲೆ ಸಿಗ್ತಿಲ್ಲ.  ಇತ್ತ ಹೊರರಾಜ್ಯದಿಂದ ಬರುವ ವಸ್ತುಗಳ ದರ ಏರಿಕೆಯಾಗಿದ್ದು ಜನಸಾಮಾನ್ಯರು ಹೈರಾಣಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮೀ ಪ್ರಕರಣ ಬೆಳಕಿಗೆ ತಂದ ಶಾಸಕ ಮಹೇಶ ಟೆಂಗಿನಕಾಯಿಗೆ ಭರ್ಜರಿ ಸ್ವಾಗತ
India Latest News Live: ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್‌ 3 ಲಕ್ಷ ರು. ವೇತನ ಆಫರ್‌