ಯುಪಿಯಲ್ಲಿ ಸಿಡಿಲಿಗೆ 32 ಮಂದಿ ಬಲಿ: ಮೃತರಿಗೆ 4 ಲಕ್ಷ ರು. ಪರಿಹಾರ

Published : Jul 22, 2019, 10:53 AM IST
ಯುಪಿಯಲ್ಲಿ ಸಿಡಿಲಿಗೆ 32 ಮಂದಿ ಬಲಿ: ಮೃತರಿಗೆ 4 ಲಕ್ಷ ರು. ಪರಿಹಾರ

ಸಾರಾಂಶ

ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 32ಕ್ಕೂ ಹೆಚ್ಚು ಮಂದಿ ಬಲಿ| ಮೃತರ ಕುಟುಂಬಕ್ಕೆ 4 ಲಕ್ಷ ರು.

ಲಖನೌ[ಜ.22]: ಉತ್ತರ ಭಾರತದಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಜನಜೀವನ ತತ್ತರಗೊಂಡಿರುವ ಬೆನ್ನಲ್ಲೇ, ಸಿಡಿಲು ಬಡಿದು 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಲ್ಲದೆ, ಸಿಡಿಲಿಗೆ ಇತರೆ 13 ಮಂದಿ ಗಾಯಗೊಂಡಿದ್ದಾರೆ.

ಕಾನ್ಪುರ ಹಾಗೂ ಫತೇಪುರದಲ್ಲಿ ತಲಾ 7 ಮಂದಿ, ಝಾನ್ಸಿಯಲ್ಲಿ 5, ಜಲೌನ್‌ನಲ್ಲಿ 4, ಹಮೀರ್‌ಪುರದಲ್ಲಿ 3, ಗಾಜಿಪುರದಲ್ಲಿ ಇಬ್ಬರು ಹಾಗೂ ಜಾನ್‌ಪುರ, ಪ್ರತಾಪ್‌ಗಢ, ಕಾನ್ಪುರ ದೆಹಾತ್‌ ಮತ್ತು ಚಿತ್ರಕೂಟದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಈ ಘಟನೆಗೆ ಸಂತಾಪ ಸೂಚಿಸಿರುವ ಸಿಎಂ ಯೋಗಿ ಆದಿತ್ಯನಾಥ್‌ ಮೃತರ ಕುಟುಂಬಕ್ಕೆ 4 ಲಕ್ಷ ರು. ಪರಿಹಾರ ನೀಡುವಂತೆ ಆಯಾ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿವಿ ಪತ್ರಿಕೋದ್ಯಮದಲ್ಲಿ ಮೇಲುಗೈ.. ‘ಏಷ್ಯಾನೆಟ್ ಸುವರ್ಣ ನ್ಯೂಸ್‌’ಗೆ 8 ಎನ್ಬಾ ಪ್ರಶಸ್ತಿ
ಬ್ಯೂಟಿ ಸೀಕ್ರೆಟ್.. ಇಲ್ಲಿದೆ ಭಾರತೀಯ ಮಹಿಳೆಯರ ಮೇಕಪ್ ಕ್ರಾಂತಿ ಶುರುವಾದ ಕತೆ!