ನ್ಯಾಯಮೂರ್ತಿ ಉದಯ್‌ ಲಲಿತ್‌ ವರ್ಗಾವಣೆಗೆ ಪತ್ರ

Published : Sep 17, 2016, 04:20 PM ISTUpdated : Apr 11, 2018, 12:56 PM IST
ನ್ಯಾಯಮೂರ್ತಿ ಉದಯ್‌ ಲಲಿತ್‌ ವರ್ಗಾವಣೆಗೆ ಪತ್ರ

ಸಾರಾಂಶ

ಶ್ರೀರಂಗಟಪ್ಟಣ (ಸೆ.17): ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್‌ ಸ್ಥಾಪಿಸಿರುವ ದ್ವಿ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಯು. ಉದಯ್‌ ಲಲಿತ್‌ ಅವರನ್ನು ಬೇರೆ ಪೀಠಕ್ಕೆ ವರ್ಗಾಹಿಸಬೇಕು ಎಂದು ಪಟ್ಟಣದ ವಕೀಲರು ಶನಿವಾರ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಎಸ. ಠಾಕೂರ್‌ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ನ್ಯಾ. ಯು. ಉದಯ್‌ ಲಲಿತ್‌ 2013ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಪರ 2 ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದರು. ಅಂತಹವರು ಈಗ ಕಾವೇರಿ ನದಿ ನೀರು ಹಂಚಿಕೆ ವ್ಯಾಜ್ಯದ ನ್ಯಾಯಪೀಠಕ್ಕೆ ಸದಸ್ಯರಾಗಿದ್ದಾರೆ. ಸದರಿ ವ್ಯಾಜ್ಯದ ವಿಚಾರಣೆ ನಡೆಸಿ ತೀರ್ಪನ್ನು ನೀಡಿದ್ದಾರೆ. ಜನರಲ್ಲಿ ನ್ಯಾಯಾಂಗದ ಬಗ್ಗೆ ನಂಬಿಕೆ ಉಳಿಯಬೇಕಾದರೆ ನ್ಯಾಯಾಮೂರ್ತಿಗಳಾದ ಯು. ಉದಯ್‌ ಲಲಿತ್‌ ಅವರನ್ನು ಬೇರೆ ಪೀಠಕ್ಕೆ ವರ್ಗಾಹಿಸಬೇಕು ಎಂದು ಮನವಿ ಸಲ್ಲಿಸಿದರು.

ವಕೀಲರು ಯು. ಉದಯ್‌ ಲಲಿತ್‌ ಅವರಿಗೂ ಪತ್ರ ಬರೆದಿದ್ದು ಕಾವೇರಿ ತಾವು ಈ ಪ್ರಕರಣದ ಕಾವೇರಿ ನದಿ ನೀರು ಹಂಚಿಕೆ ಪೀಠದಿಂದ ಹಿಂದೆ ಸರಿಯಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಮರೀಗೌಡ, ನಾರಾಯಣಸ್ವಾಮಿ ಅಂಚೆ ಮೂಲಕ ಮೂಲಕ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ರವಾನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ: ಸಚಿವ ಎಂ.ಬಿ.ಪಾಟೀಲ್
Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ