ಆನ್ ದೇಶ್ ಕೀ, ಶಾನ್ ದೇಶ್ ಕೀ, ದೇಶ್ ಕೀ ಹಮ್ ಸಂತಾನ್:ಕಿಚ್ಚು ಹಚ್ಚಿದ ಜಮಿಯಾಂಗ್!

Published : Aug 06, 2019, 06:39 PM IST
ಆನ್ ದೇಶ್ ಕೀ, ಶಾನ್ ದೇಶ್ ಕೀ, ದೇಶ್ ಕೀ ಹಮ್ ಸಂತಾನ್:ಕಿಚ್ಚು ಹಚ್ಚಿದ ಜಮಿಯಾಂಗ್!

ಸಾರಾಂಶ

ಲೋಕಸಭೆ ನಡುಗಿಸಿದ ಲಡಾಖ್ ಬಿಜೆಪಿ ಸಂಸದ ಜಮಿಯಾಂಗ್ ತ್ಸೆರಿಂಗ್| ಯುವ ಸಂಸದ ಜಮಿಯಾಂಗ್ ಭಾಷಣಕ್ಕೆ ತಲೆದೂಗಿದ ಸದನ| ಕಾಶ್ಮೀರ ಮಸೂದೆ ಬೆಂಬಲಿಸಿ ಜಮಿಯಾಂಗ್ ತ್ಸೆರಿಂಗ್’ರಿಂದ ಐತಿಹಾಸಿಕ ಭಾಷಣ| ಅಬ್ದುಲ್ಲಾ, ಮುಪ್ತಿ ಕುಟುಂಬಕ್ಕೆ ಮುಟ್ಟಿ ನೋಡಿಕೊಳ್ಳುವ ಉತ್ತರ ನೀಡಿದ ಜಮಿಯಾಂಗ್| ಜಮಿಯಾಂಗ್’ರಿಂದ ಲಡಾಕ್ ಜನತೆಯ ಭಾರತೀಯತೆಯ ಅನಾವರಣ|

ನವದೆಹಲಿ(ಆ.06): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಣಯವನ್ನು ಇಡೀ ದೇಶ ಒಂದಾಗಿ ಬೆಂಬಲ ನೀಡಿದೆ.

ಈ ವೇಳೆ ಲಡಾಕ್’ನ ಬಿಜೆಪಿ ಸಂಸರ ಜಮಿಯಾಂಗ್ ತ್ಸೆರಿಂಗ್ ಮಸೂದೆ ಬೆಂಬಲಿಸಿ ಮಾಡಿದ ಭಾಷಣಕ್ಕೆ ಇಡೀ ಲೋಕಸಭೆ ತಲೆದೂಗಿದ ಅಪರೂಪದ ಪ್ರಸಂಗ ನಡೆಯಿತು.

ಮಸೂದೆ ಬೆಂಬಲಿಸಿ ಮಾತನಾಡಿದ ಜಮಿಯಾಂಗ್, ದಶಕಗಳಿಂದ ಉಡುಗಿಸಲಾಗಿದ್ದ ಲಡಾಖ್ ಧ್ವನಿಯನ್ನು ಆಲಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಎಂದು ಹೇಳಿದರು.

ಲಡಾಕ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಇಂದಿನ ದುಸ್ಥಿಗೆ ರಾಜ್ಯವನ್ನು ಸುದೀರ್ಘವಾಗಿ ಆಳಿದ ಎರಡು ಕುಟುಂಗಳೇ ಕಾರಣ ಎಂದು ಪರೋಕ್ಷವಾಗಿ ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬವನ್ನು ಜಮಿಯಾಂಗ್ ಕುಟುಕಿದರು.

ಲಡಾಕ್ ಮೊದಲಿನಿಂದಲೂ ಕೇಂದ್ರಾಡಳಿತ ಪ್ರದೇಶಕ್ಕಾಗಿ ಆಗ್ರಹಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಆಡಳಿತಗಾರರ ನಿರ್ಲಕ್ಷ್ಯಕ್ಕೊಳಗಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಜಮಿಯಾಂಗ್ ಆಕ್ರೋಶ ಹೊರಹಾಕಿದರು.

ಲಡಾಕ್ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟ ಜಮಿಯಾಂಗ್, ತಮ್ಮ ಭಾಷಣದ ಕೊನೆಯಲ್ಲಿ ಲಡಾಖ್ ಜನತೆಯ ಭಾರತೀಯತೆಯನ್ನು ಸದನದ ಮುಂದೆ ಅನಾವರಣಗೊಳಸಿದ್ದು ಸದನದ ಎಲ್ಲಾ ಸದಸ್ಯರನ್ನು ರೋಮಾಂಚನಗೊಳಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು
ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ