ಆನ್ ದೇಶ್ ಕೀ, ಶಾನ್ ದೇಶ್ ಕೀ, ದೇಶ್ ಕೀ ಹಮ್ ಸಂತಾನ್:ಕಿಚ್ಚು ಹಚ್ಚಿದ ಜಮಿಯಾಂಗ್!

By Web DeskFirst Published Aug 6, 2019, 6:39 PM IST
Highlights

ಲೋಕಸಭೆ ನಡುಗಿಸಿದ ಲಡಾಖ್ ಬಿಜೆಪಿ ಸಂಸದ ಜಮಿಯಾಂಗ್ ತ್ಸೆರಿಂಗ್| ಯುವ ಸಂಸದ ಜಮಿಯಾಂಗ್ ಭಾಷಣಕ್ಕೆ ತಲೆದೂಗಿದ ಸದನ| ಕಾಶ್ಮೀರ ಮಸೂದೆ ಬೆಂಬಲಿಸಿ ಜಮಿಯಾಂಗ್ ತ್ಸೆರಿಂಗ್’ರಿಂದ ಐತಿಹಾಸಿಕ ಭಾಷಣ| ಅಬ್ದುಲ್ಲಾ, ಮುಪ್ತಿ ಕುಟುಂಬಕ್ಕೆ ಮುಟ್ಟಿ ನೋಡಿಕೊಳ್ಳುವ ಉತ್ತರ ನೀಡಿದ ಜಮಿಯಾಂಗ್| ಜಮಿಯಾಂಗ್’ರಿಂದ ಲಡಾಕ್ ಜನತೆಯ ಭಾರತೀಯತೆಯ ಅನಾವರಣ|

ನವದೆಹಲಿ(ಆ.06): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಣಯವನ್ನು ಇಡೀ ದೇಶ ಒಂದಾಗಿ ಬೆಂಬಲ ನೀಡಿದೆ.

ಈ ವೇಳೆ ಲಡಾಕ್’ನ ಬಿಜೆಪಿ ಸಂಸರ ಜಮಿಯಾಂಗ್ ತ್ಸೆರಿಂಗ್ ಮಸೂದೆ ಬೆಂಬಲಿಸಿ ಮಾಡಿದ ಭಾಷಣಕ್ಕೆ ಇಡೀ ಲೋಕಸಭೆ ತಲೆದೂಗಿದ ಅಪರೂಪದ ಪ್ರಸಂಗ ನಡೆಯಿತು.

ಮಸೂದೆ ಬೆಂಬಲಿಸಿ ಮಾತನಾಡಿದ ಜಮಿಯಾಂಗ್, ದಶಕಗಳಿಂದ ಉಡುಗಿಸಲಾಗಿದ್ದ ಲಡಾಖ್ ಧ್ವನಿಯನ್ನು ಆಲಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಎಂದು ಹೇಳಿದರು.

Jamyang Tsering, BJP MP from Ladakh in Lok Sabha on : What will be lost with this decision? Sirf do pariwar rozi-roti khoyenge aur Kashmir ka bhavishya ujjwal hone wala hai. pic.twitter.com/Jb4AMLQnOa

— ANI (@ANI)

ಲಡಾಕ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಇಂದಿನ ದುಸ್ಥಿಗೆ ರಾಜ್ಯವನ್ನು ಸುದೀರ್ಘವಾಗಿ ಆಳಿದ ಎರಡು ಕುಟುಂಗಳೇ ಕಾರಣ ಎಂದು ಪರೋಕ್ಷವಾಗಿ ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬವನ್ನು ಜಮಿಯಾಂಗ್ ಕುಟುಕಿದರು.

Ladakh MP Jamyang Tsering: UPA gave Kashmir a central University in 2011, Jammu fought & took a central univ. I was a Student Union leader. We demanded for a central univ in Ladakh, but we didn't get any. PM Modi Ji recently gave us a university, 'Modi Hai to Mumkin Hai' https://t.co/rHdW3EOF0w

— ANI (@ANI)

ಲಡಾಕ್ ಮೊದಲಿನಿಂದಲೂ ಕೇಂದ್ರಾಡಳಿತ ಪ್ರದೇಶಕ್ಕಾಗಿ ಆಗ್ರಹಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಆಡಳಿತಗಾರರ ನಿರ್ಲಕ್ಷ್ಯಕ್ಕೊಳಗಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಜಮಿಯಾಂಗ್ ಆಕ್ರೋಶ ಹೊರಹಾಕಿದರು.

ಲಡಾಕ್ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟ ಜಮಿಯಾಂಗ್, ತಮ್ಮ ಭಾಷಣದ ಕೊನೆಯಲ್ಲಿ ಲಡಾಖ್ ಜನತೆಯ ಭಾರತೀಯತೆಯನ್ನು ಸದನದ ಮುಂದೆ ಅನಾವರಣಗೊಳಸಿದ್ದು ಸದನದ ಎಲ್ಲಾ ಸದಸ್ಯರನ್ನು ರೋಮಾಂಚನಗೊಳಿಸಿತು.

click me!