
ನವದೆಹಲಿ (ಏ.14): ಬೇಹುಗಾರಿಕಾ ಆರೋಪದಡಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್ ಗೆ ಗಲ್ಲುಶಿಕ್ಷೆ ನೀಡಿದ ತೀರ್ಪಿನ ಪ್ರತಿ, ಹಾಗೂ ಚಾರ್ಜ್ ಶೀಟ್ ಪ್ರತಿಯನ್ನು ನೀಡುವಂತೆ ಭಾರತ ಪಾಕ್ ಗೆ ಕೇಳಿದೆ.
ಭಾರತದ ಹೈ ಕಮಿಷನರ್ ಗೌತಮ್ ಬಂಬಾವಾಲೆ ಪಾಕ್ ನ ವಿದೇಶಾಂಗ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗಲ್ಲುಶಿಕ್ಷೆ ತೀರ್ಪಿನ ಪ್ರತಿ ಹಾಗೂ ಚಾರ್ಜ್ ಶೀಟ್ ನ ಪ್ರತಿಯನ್ನು ಕೇಳಿದ್ದೇನೆ ಎಂದು ಗೌತಮ್ ಬಂಬಾವಾಲೆ ಹೇಳಿದ್ದಾರೆ.
ಭಾರತೀಯ ರಾಯಭಾರಿ ಜಾಧವ್ ರನ್ನು ಭೇಟಿ ಮಾಡಲು ಅವಕಾಶ ಕೊಡಿ ಎಂದು ಕಳೆದ ಒಂದು ವರ್ಷದಿಂದ 13 ಬಾರಿ ಕೇಳಿದ್ದು ನಮ್ಮ ಮನವಿಯನ್ನು ಪಾಕ್ ನಿರಾಕರಿಸಿದೆ. ಈ ಪ್ರಕರಣ ಗೂಢಾಚರ್ಯೆಗೆ ಸಂಬಂಧಿಸಿರುವುದರಿಂದ ಭೇಟಿಗೆ ಅವಕಾಶ ಕೊಡಲಾಗುವುದಿಲ್ಲವೆಂದು ಪಾಕ್ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ. ಆದರೆ ಅಂತರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಅವಕಾಶ ನೀಡಬೇಕೆಂದು ಅಲ್ಲಿನ ಹೈಕೋರ್ಟ್ ಹೇಳುತ್ತದೆ. ಈಗ ಮತ್ತೊಮ್ಮೆ ಮನವಿ ಮಾಡಿದ್ದೇವೆ ಎಂದು ಗೌತಮ್ ಹೇಳಿದ್ದಾರೆ.
ಏತನ್ಮಧ್ಯೆ ಪಾಕಿಸ್ತಾನದ ತೀರ್ಪನ್ನು ವಿದೇಶಾಂಗ ವ್ಯವಹಾರ ಪ್ರಧಾನ ಮಂತ್ರಿ ಸಲಹೆಗಾರ ಸಮರ್ಥಿಸಿಕೊಂಡು, ಹಿಂದೂ, ಮುಸ್ಲೀಂ ಹೆಸರಿನಲ್ಲಿ ಜಾಧವ್ ಎರಡು ಪಾಸ್ ಪೋರ್ಟ್ ಯಾಕೆ ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಭಾರತದ ಬಳಿ ಉತ್ತರವಿಲ್ಲ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.