ಬೆಂಗಳೂರನ್ನು 'ಬಂದಳೂರು' ಎಂದು ಕರೆದು ಪೇಚಿಗೆ ಸಿಕ್ಕು ಟ್ವೀಟ್ ಡಿಲೀಟ್ ಮಾಡಿದ ಕಿರಣ್ ಮಜುಮ್ದಾರ್

Published : Sep 09, 2016, 05:50 AM ISTUpdated : Apr 11, 2018, 01:13 PM IST
ಬೆಂಗಳೂರನ್ನು 'ಬಂದಳೂರು' ಎಂದು ಕರೆದು ಪೇಚಿಗೆ ಸಿಕ್ಕು ಟ್ವೀಟ್ ಡಿಲೀಟ್ ಮಾಡಿದ ಕಿರಣ್ ಮಜುಮ್ದಾರ್

ಸಾರಾಂಶ

ಸುವರ್ಣನ್ಯೂಸ್ ವರದಿಯಿಂದ ಎಚ್ಚೆತ್ತ ಕಿರಣ್ ಮಜುಮ್ದಾರ್ ತಾವು ಮಾಡಿದ ಆ ಎರಡು ಟ್ವೀಟ್'ಗಳನ್ನು ಡಿಲೀಟ್ ಮಾಡಿದ್ದಾರೆ.

ಬೆಂಗಳೂರು(ಸೆ. 09): ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ ಬೆಂಗಳೂರನ್ನು ಬಂದ್'ನ ನಗರವೆಂದು ಬಣ್ಣಿಸಿ ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಬೆಂಗಳೂರಿಗೆ 'ಬಂದಳೂರು' ಎಂದು ಕರೆಯಬೇಕೆಂದು ಕಿರಣ್ ಮಜುಮ್ದಾರ್ ಅವರು ಟ್ವೀಟ್ ಮಾಡಿದ್ದರು. ಬಂದ್'ಗಳಿಂದಾಗಿ ಪ್ರೊಡಕ್ಟಿವಿಟಿಗೆ ತೊಂದರೆಯಾಗುತ್ತಿದೆ ಎಂದು ವಿಷಾದಿಸಿದ್ದರು. ಕುಡಿಯುವ ನೀರಿನ ತತ್ವಾರದ ಅರಿವು ಇಲ್ಲದೆಯೇ ಕಿರಣ್ ಮಜುಮ್ದಾರ್ ಅವರು ಇಂಥ ಹೇಳಿಕೆ ನೀಡಿದೆ ಎಂದು ಸುವರ್ಣನ್ಯೂಸ್ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಕಿರಣ್ ಮಜುಮ್ದಾರ್ ತಾವು ಮಾಡಿದ ಆ ಎರಡು ಟ್ವೀಟ್'ಗಳನ್ನು ಡಿಲೀಟ್ ಮಾಡಿದ್ದಾರೆ. ಜೊತೆಗೆ, ತನ್ನ ಮಾತುಗಳನ್ನು ತಿರುಚಿಸಿ ವರದಿ ಪ್ರಸಾರ ಮಾಡಲಾಗಿದೆ. ಯಾವುದೇ ಹಿಂಸಾಚಾರವಿಲ್ಲದೇ ಬಿಕ್ಕಟ್ಟನ್ನು ಬಗೆಹರಿಸಬೇಕೆಂದು ನಾನು ಹೇಳಿದ್ದಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದ ರೈತರು ಮತ್ತು ಜನತೆಯ ಆಶಯಗಳಿಗೆ ಬೆಂಬಲ ಸೂಚಿಸಿ ತಾವು ಬಂದ್ ಆಚರಿಸುತ್ತಿರುವುದಾಗಿ ತಮ್ಮ ಅಭಿಪ್ರಾಯವನ್ನು ಬದಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
ವಿದೇಶದ ಅತಿಥಿಗಳಿಗೆ ನೆಲೆಯಾದ ಸಿಂಗಟಾಲೂರಿನ ಹಿನ್ನೀರು, ಹಿಮಾಲಯ ದಾಟಿ ಬಂದ ರಹಸ್ಯವಿದು!