ಮಗಳ ನಿಶ್ಚಿತಾರ್ಥ ರದ್ದು ಮಾಡಿ ನೆರೆ ಪರಿಹಾರಕ್ಕೆ ದೇಣಿಗೆ ನೀಡಿದ ಪತ್ರಕರ್ತ

Published : Aug 18, 2018, 07:58 AM ISTUpdated : Sep 09, 2018, 10:09 PM IST
ಮಗಳ ನಿಶ್ಚಿತಾರ್ಥ ರದ್ದು ಮಾಡಿ ನೆರೆ ಪರಿಹಾರಕ್ಕೆ ದೇಣಿಗೆ ನೀಡಿದ ಪತ್ರಕರ್ತ

ಸಾರಾಂಶ

ಕೇರಳದ ಪತ್ರಕರ್ತರೊಬ್ಬರು ತಮ್ಮ ಮಗಳ ಮದುವೆ ನಿಶ್ಚಿತಾರ್ಥ ರದ್ದು ಮಾಡಿ, ಆ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಲಿದ್ದಾರೆ. ಸಿಪಿಎಂ ಮುಖವಾಣಿ ‘ದೇಶಾಭಿಮಾನಿ’ಯ ಸ್ಥಾನಿಕ ಸಂಪಾದಕ ಮನೋಜ್‌ ತಮ್ಮ ಮಗಳ ಭಾವೀ ಅಳಿಯನ ಕುಟುಂಬದ ಜೊತೆ ಮಾತನಾಡಿ, ಭಾನುವಾರ ಕಣ್ಣೂರಿನಲ್ಲಿ ನಡೆಯಲಿದ್ದ ನಿಶ್ಚಿತಾರ್ಥ ರದ್ದುಪಡಿಸಿ, ಆ ಹಣವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ.

ತಿರುವನಂತಪುರಂ(ಆ.18]: ಸತತ ಭೀಕರ ಮಳೆ, ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ದೇಶಾದ್ಯಂತದಿಂದ ಸಾಕಷ್ಟು ನೆರವು ಹರಿದು ಬರುತ್ತಿದೆ. ಅಂತಹ ದೇಣಿಗೆಗಳಲ್ಲಿ ಕೆಲವೊಂದು ದೇಣಿಗೆಗಳ ಹಿಂದೆ ಮನಸ್ಸಿಗೆ ಆಪ್ತವೆನಿಸಿಸುವ, ಮಾನವೀಯ ಕತೆಗಳೂ ಇವೆ. 

ಅಂಥದ್ದರಲ್ಲಿ ಕೇರಳದ ಪತ್ರಕರ್ತರೊಬ್ಬರು ತಮ್ಮ ಮಗಳ ಮದುವೆ ನಿಶ್ಚಿತಾರ್ಥ ರದ್ದು ಮಾಡಿ, ಆ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಲಿದ್ದಾರೆ. ಸಿಪಿಎಂ ಮುಖವಾಣಿ ‘ದೇಶಾಭಿಮಾನಿ’ಯ ಸ್ಥಾನಿಕ ಸಂಪಾದಕ ಮನೋಜ್‌ ತಮ್ಮ ಮಗಳ ಭಾವೀ ಅಳಿಯನ ಕುಟುಂಬದ ಜೊತೆ ಮಾತನಾಡಿ, ಭಾನುವಾರ ಕಣ್ಣೂರಿನಲ್ಲಿ ನಡೆಯಲಿದ್ದ ನಿಶ್ಚಿತಾರ್ಥ ರದ್ದುಪಡಿಸಿ, ಆ ಹಣವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ.

ಒಟ್ಟಿನಲ್ಲಿ ಕೇರಳ ಪ್ರವಾಹ ಅಲ್ಲಿನ ಜನಜೀವನವನ್ನು ಅಕ್ಷರಶಃ ನಿರ್ಗತಿಕರೆನಿಸಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಸಂಘಸಂಸ್ಥೆಗಳು ಕೇರಳ ನೆರವಿಗೆ ಧಾವಿಸುತ್ತಿದ್ದಾರೆ.
 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!