ಮಗಳ ನಿಶ್ಚಿತಾರ್ಥ ರದ್ದು ಮಾಡಿ ನೆರೆ ಪರಿಹಾರಕ್ಕೆ ದೇಣಿಗೆ ನೀಡಿದ ಪತ್ರಕರ್ತ

By Web DeskFirst Published Aug 18, 2018, 7:58 AM IST
Highlights

ಕೇರಳದ ಪತ್ರಕರ್ತರೊಬ್ಬರು ತಮ್ಮ ಮಗಳ ಮದುವೆ ನಿಶ್ಚಿತಾರ್ಥ ರದ್ದು ಮಾಡಿ, ಆ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಲಿದ್ದಾರೆ. ಸಿಪಿಎಂ ಮುಖವಾಣಿ ‘ದೇಶಾಭಿಮಾನಿ’ಯ ಸ್ಥಾನಿಕ ಸಂಪಾದಕ ಮನೋಜ್‌ ತಮ್ಮ ಮಗಳ ಭಾವೀ ಅಳಿಯನ ಕುಟುಂಬದ ಜೊತೆ ಮಾತನಾಡಿ, ಭಾನುವಾರ ಕಣ್ಣೂರಿನಲ್ಲಿ ನಡೆಯಲಿದ್ದ ನಿಶ್ಚಿತಾರ್ಥ ರದ್ದುಪಡಿಸಿ, ಆ ಹಣವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ.

ತಿರುವನಂತಪುರಂ(ಆ.18]: ಸತತ ಭೀಕರ ಮಳೆ, ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ದೇಶಾದ್ಯಂತದಿಂದ ಸಾಕಷ್ಟು ನೆರವು ಹರಿದು ಬರುತ್ತಿದೆ. ಅಂತಹ ದೇಣಿಗೆಗಳಲ್ಲಿ ಕೆಲವೊಂದು ದೇಣಿಗೆಗಳ ಹಿಂದೆ ಮನಸ್ಸಿಗೆ ಆಪ್ತವೆನಿಸಿಸುವ, ಮಾನವೀಯ ಕತೆಗಳೂ ಇವೆ. 

ಅಂಥದ್ದರಲ್ಲಿ ಕೇರಳದ ಪತ್ರಕರ್ತರೊಬ್ಬರು ತಮ್ಮ ಮಗಳ ಮದುವೆ ನಿಶ್ಚಿತಾರ್ಥ ರದ್ದು ಮಾಡಿ, ಆ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಲಿದ್ದಾರೆ. ಸಿಪಿಎಂ ಮುಖವಾಣಿ ‘ದೇಶಾಭಿಮಾನಿ’ಯ ಸ್ಥಾನಿಕ ಸಂಪಾದಕ ಮನೋಜ್‌ ತಮ್ಮ ಮಗಳ ಭಾವೀ ಅಳಿಯನ ಕುಟುಂಬದ ಜೊತೆ ಮಾತನಾಡಿ, ಭಾನುವಾರ ಕಣ್ಣೂರಿನಲ್ಲಿ ನಡೆಯಲಿದ್ದ ನಿಶ್ಚಿತಾರ್ಥ ರದ್ದುಪಡಿಸಿ, ಆ ಹಣವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ.

ಒಟ್ಟಿನಲ್ಲಿ ಕೇರಳ ಪ್ರವಾಹ ಅಲ್ಲಿನ ಜನಜೀವನವನ್ನು ಅಕ್ಷರಶಃ ನಿರ್ಗತಿಕರೆನಿಸಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಸಂಘಸಂಸ್ಥೆಗಳು ಕೇರಳ ನೆರವಿಗೆ ಧಾವಿಸುತ್ತಿದ್ದಾರೆ.
 

click me!