ದಂಡ ಕಟ್ಟಿದ ರಾಜ್ಯಪಾಲ..! ಯಾಕೆ..?

Published : Jul 06, 2018, 08:52 AM IST
ದಂಡ  ಕಟ್ಟಿದ ರಾಜ್ಯಪಾಲ..! ಯಾಕೆ..?

ಸಾರಾಂಶ

ರಾಜ್ಯಪಾಲರು ತಾವು ಕಾನೂನು ಉಲ್ಲಂಘನೆ ಮಾಡಿದ್ದ ಪ್ರಕರಣವೊಂದಕ್ಕೆ ದಂಡವನ್ನು ಕಟ್ಟಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳೂ ಆಗಿರುವ ಕೇರಳದ ಹಾಲಿ ರಾಜ್ಯಪಾಲ ಸದಾಶಿವಂ ಅವರು ಮಿತಿಮೀರಿದ ವೇಗದಲ್ಲಿ ಕಾರು ಚಾಲನೆ ಕೇಸಲ್ಲಿ ದಂಡ ಪಾವತಿಸಿದ್ದಾರೆ. 

ತಿರುವನಂತಪುರ: ರಾಜ್ಯಪಾಲರು, ಪ್ರತಿ ರಾಜ್ಯದ ಪ್ರಥಮ ಪ್ರಜೆ. ಆದರೆ ಇಂಥ ಯಾವುದೇ ಹಮ್ಮುಬಿಮ್ಮು ತೋರದೆ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳೂ ಆಗಿರುವ ಕೇರಳದ ಹಾಲಿ ರಾಜ್ಯಪಾಲ ಸದಾಶಿವಂ ಅವರು ಮಿತಿಮೀರಿದ ವೇಗದಲ್ಲಿ ಕಾರು ಚಾಲನೆ ಕೇಸಲ್ಲಿ 400 ರು. ದಂಡ ಪಾವತಿ ಮಾಡಿದ್ದಾರೆ. 

ಏ.7ರಂದು ವೆಲ್ಲಯಂಬಾಲರಂ- ಕೌಡಿದಾರ್‌ ಮಾರ್ಗದಲ್ಲಿ ರಾಜ್ಯಪಾಲರ ಕಾರು ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸಿತ್ತು. ಇದನ್ನು ಸ್ವಯಂಚಾಲಿತ ಯಂತ್ರ ಪತ್ತೆಹಚ್ಚಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜ್ಯಪಾಲರ ಕಚೇರಿಗೆ ನಿಯಮ ಉಲ್ಲಂಘಟನೆಗೆ ದಂಡ ಪಾವತಿಸುವಂತೆ ನೋಟಿಸ್‌ ಜಾರಿಯಾಗಿತ್ತು. ಘಟನೆ ನಡೆದಾಗ ತಾವು ಕಾರಿನಲ್ಲಿ ಇಲ್ಲದೇ ಇದ್ದರೂ, ಸದಾಶಿವಂ ಅವರು ತಮ್ಮ ಕಚೇರಿ ಮೂಲಕ 400 ರು. ದಂಡ ಪಾವತಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಾರಿವಾಳ ಪ್ರಿಯರಿಗೆ ಶಾಕ್: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ಹಾಕೋದು ನಿಷೇಧ
ಕ್ರಿಸ್‌ಮಸ್ ರಜೆ ಮುಗಿಸಿ ಕೆಲಸಕ್ಕೆ ಬರುತ್ತಿದ್ದ ಟೆಕ್ಕಿ; ಕಾರು ಮರಕ್ಕೆ ಡಿಕ್ಕಿಯಾಗಿ ಅಪ್ಪ-ಮಗ ಸಾವು