ವಿಶ್ವಸಂಸ್ಥೆ ಪರಿಗಣಿಸದ ಸತ್ಯ ತೋರಿಸ್ತಿವಿ ನೋಡಿ..!

Published : Jun 15, 2018, 03:21 PM IST
ವಿಶ್ವಸಂಸ್ಥೆ ಪರಿಗಣಿಸದ ಸತ್ಯ ತೋರಿಸ್ತಿವಿ ನೋಡಿ..!

ಸಾರಾಂಶ

ಕಣಿವೆಯಲ್ಲಿ ಮಾನ ಹಕ್ಕು ಉಲ್ಲಂಘನೆ? ವಿಶ್ವಸಂಸ್ಥೆ ಪರಿಗಣಿಸದ ಸತ್ಯಗಳೇನು? ಸೇನಾ ವಾಹನದ ಮೇಲೆ ಕಲ್ಲು ತೂರಾಟದ ದೃಶ್ಯ ರಕ್ಷಣೆಗಾಗಿ ಪರದಾಡುತ್ತಿರುವ ಯೋಧರ ದೃಶ್ಯ

ಶ್ರೀನಗರ(ಜೂ.15): ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆ ವರದಿ ಮಾಡಿ ವಿವಾದ ಸೃಷ್ಟಿಸಿದೆ. ಈ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಹೌದಾದರೂ, ಈ ವರದಿಯಿಂದ ಕೆಲವರಂತೂ ಖುಷಿಯಾಗಿರುವುದು ಸತ್ಯ.

ಆದರೆ ಕಣಿವೆಯಲ್ಲಿ ಶಾಂತಿ ನೆಲೆಸಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಶ್ರಮಿಸುತ್ತಿರುವ ಭಾರತೀಯ ಯೋಧರು ಮತ್ತು ಅವರು ಪಡುತ್ತಿರುವ ಕಷ್ಟ ಎಂತದ್ದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಒದಗಿಸಿದೆ.

ರಸ್ತೆಯಲ್ಲಿ ಹೋಗುತ್ತಿದ್ದಾಗ ಅಚಾನಕ್ಕಾಗಿ ಬೈಕ್ ಗೆ ಭದ್ರತಾ ಪಡೆಗಳ ವಾಹನ ಡಿಕ್ಕಿ ಹೊಡೆದ ಕಾರಣಕ್ಕೆ ಯೋಧರಿದ್ದ ವಾಹನದತ್ತ ಸಾವರ್ವಜನಿಕರು ಕಲ್ಲೆಸೆದ ಘಟನೆ ನಡೆದಿದೆ.

ಇಲ್ಲಿನ ಬನಿಹಾಲ್ ಬಳಿ ಸಿಆರ್‌ಪಿಎಫ್ ವಾಹನವೊಂದು ಅಚಾನಕ್ಕಾಗಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಇದನ್ನೇ ನೆಪ ಮಾಡಿಕೊಂಡ ಸಾವರ್ವಜನಿಕರು ಯೋಧರಿದ್ದ ವಾಹನದತ್ತ ಕಲ್ಲು ತೂರಾಟ ನಡೆಸಿದ್ದಾರೆ. ವಾಹನ ಒಳಗಿದ್ದ ಯೋಧರು ತಮ್ಮ ರಕ್ಷಣೆಗಾಗಿ ಪರದಾಡುತ್ತಿರುವ ದೃಶ್ಯ ಒಂದು ಕ್ಷಣ ದಂಗು ಬಡಿಸುವುದು ಸುಳ್ಳಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ