ಕಾರ್ತಿ ಚಿದಂಬರಂಗೆ ಮತ್ತೆ ಸಂಕಷ್ಟ - ತಿಹಾರ್ ಜೈಲ್’ಗೆ ರವಾನೆ

Published : Mar 12, 2018, 02:49 PM ISTUpdated : Apr 11, 2018, 01:02 PM IST
ಕಾರ್ತಿ ಚಿದಂಬರಂಗೆ  ಮತ್ತೆ ಸಂಕಷ್ಟ - ತಿಹಾರ್ ಜೈಲ್’ಗೆ ರವಾನೆ

ಸಾರಾಂಶ

ಕಾರ್ತಿ ಚಿದಂಬರಂಗೆ ಮತ್ತೆ ಸಂಕಷ್ಟ ಎದುರಾಗಿದೆ. ಮಾರ್ಚ್ 24ರವರೆಗೆ ಕಾರ್ತಿ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಆದೇಶ ನೀಡಿದೆ.

ಚೆನ್ನೈ : ಕಾರ್ತಿ ಚಿದಂಬರಂಗೆ ಮತ್ತೆ ಸಂಕಷ್ಟ ಎದುರಾಗಿದೆ. ಮಾರ್ಚ್ 24ರವರೆಗೆ ಕಾರ್ತಿ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಆದೇಶ ನೀಡಿದೆ. ಇಂದು ಕಾರ್ತಿ ಸಿಬಿಐ ಕಸ್ಟಡಿ ಅವಧಿ ಮುಗಿದಿತ್ತು. ಈ ಮತ್ತೆ ವಿಚಾರಣೆ ನಡೆದಿದ್ದು,  ಕಾರ್ತಿ ಅವರನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ  ಸದ್ಯ ಕಾರ್ತಿ ಅವರನ್ನು ತಿಹಾರ್ ಜೈಲ್’ಗೆ ರವಾನೆ ಮಾಡಲಾಗಿದೆ.

ಕಾರ್ತಿ ಇರಿಸಿದ್ದ ಎಲ್ಲಾ ಬೇಡಿಕೆಗಳೂ ಕೂಡ ತಿರಸ್ಕೃತವಾಗಿದ್ದು, ಮನೆ ಆಹಾರವನ್ನು ಸೇವಿಸಲು ಕೂಡ ಅವಕಾಶವನ್ನು ನಿರಾಕರಿಸಲಾಗಿದೆ.  ಸಿಬಿಐಗೆ ಕಾರ್ತಿ ಚಿದಂಬರಂ ಕೇಸಲ್ಲಿ ದೊಡ್ಡ ಜಯ ದೊರಕಿದೆ.  

ಒಟ್ಟು 14 ದಿನಗಳ ಕಾಲ ಸಿಬಿಐ ಕಷ್ಟಡಿಯಲ್ಲಿದ್ದ ಕಾರ್ತಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದರಿಂದ  ಮತ್ತೆ ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಸಂಕಷ್ಟ ಎದುರಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ: ಕುತೂಹಲ!
ರಾಯಚೂರು: ತಾಯಿ ಬುದ್ದಿವಾದ ಹೇಳಿದಕ್ಕೆ ತುಂಗಭದ್ರಾ ಕಾಲುವೆಗೆ ಹಾರಿ ದುಡುಕಿದ ಮಗಳು!