ನಾನು ಹೊಸಬನಲ್ಲ, ಇಲ್ಲಿನ ಗಲ್ಲಿಗಲ್ಲಿಯೂ ಗೊತ್ತಿದೆ: ಬೆಂಗಳೂರು ಶಾಸಕರಿಗೆ ಪರಂ ಟಾಂಗ್‌!

Published : Jul 09, 2019, 08:34 AM IST
ನಾನು ಹೊಸಬನಲ್ಲ, ಇಲ್ಲಿನ ಗಲ್ಲಿಗಲ್ಲಿಯೂ ಗೊತ್ತಿದೆ: ಬೆಂಗಳೂರು ಶಾಸಕರಿಗೆ ಪರಂ ಟಾಂಗ್‌!

ಸಾರಾಂಶ

ಬೆಂಗಳೂರು ಶಾಸಕರಿಗೆ ಪರಂ ಟಾಂಗ್‌| ನಾನು ಬೆಂಗಳೂರಿಗೆ ಹೊಸಬನಲ್ಲ, ಇಲ್ಲಿನ ಗಲ್ಲಿಗಲ್ಲಿಯೂ ಗೊತ್ತಿದೆ| ಸಭೆ ಕರೆದಾಗ ಯಾವ್ಯಾವ ಶಾಸಕರು ಬಂದಿದ್ದರು ಎಂಬ ದಾಖಲೆಯಿದೆ

 ಬೆಂಗಳೂರು[ಜು.09]: ‘ನಾನು ಬೆಂಗಳೂರಿಗೆ ಹೊರಗಿನವನಲ್ಲ. ಅಲ್ಲದೆ, ಕಳೆದ ವರ್ಷಕ್ಕಿಂತ ಹೆಚ್ಚು ಅನುದಾನವನ್ನು ಬೆಂಗಳೂರಿಗೆ ಮೀಸಲಿಟ್ಟಿದ್ದೇವೆ. ಬೆಂಗಳೂರು ಶಾಸಕರ ಸಭೆ ಕರೆದಾಗ ಯಾವ್ಯಾವ ಶಾಸಕರು ಬಂದಿದ್ದರು ಎಂಬ ಹಾಜರಾತಿಯೂ ಇದೆ’ ಎಂದು ಬೆಂಗಳೂರಿನ ಅತೃಪ್ತ ಶಾಸಕರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ಬಗ್ಗೆ ಕಾಳಜಿ ಇರುವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಿದ್ದರೆ ಈ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ಪರಮೇಶ್ವರ್‌ ಅವರಿಗೆ ಜೀರೋ ಟ್ರಾಫಿಕ್‌ ಬಿಟ್ಟರೆ ಬೇರೆ ಯಾವುದೇ ಅಧಿಕಾರ ಇಲ್ಲ ಎಂದು ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅವರು ಹೇಳಿಕೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪರಮೇಶ್ವರ್‌, ನಾನು 1971ರಲ್ಲೇ ಬೆಂಗಳೂರಿಗೆ ಬಂದವನು. ನನಗೆ ಬೆಂಗಳೂರಿನ ಗಲ್ಲಿ ಗಲ್ಲಿಯೂ ಗೊತ್ತಿದೆ. ನನ್ನನ್ನು ಹೊರಗಿನವನು ಎಂದರೆ ಹೇಗೆ? ಯಾವುದೋ ಒಂದು ಜಿಲ್ಲೆಯಿಂದ ಬರುತ್ತಾರೆ ಎಂಬ ಮಾನದಂಡ ಏಕಿರಬೇಕು. ಜನಪ್ರತಿನಿಧಿಗೆ ಯಾವ ಜಿಲ್ಲೆಯಾದರೆ ಏನು ಎಂದು ಪ್ರಶ್ನಿಸಿದರು.

ಅಲ್ಲದೆ, ಶಾಸಕರಿಗೆ ಹೆಚ್ಚು ಹಣ ನೀಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ 11 ಸಾವಿರ ಕೋಟಿ ರು. ಬಜೆಟ್‌ನಲ್ಲಿ ಕೊಡಲಾಗಿದೆ. ನಾನು ಹಲವು ಬಾರಿ ಬೆಂಗಳೂರು ಶಾಸಕರ ಸಭೆ ನಡೆಸಿದ್ದೇನೆ. ಸಭೆಗೆ ಯಾವ್ಯಾವ ಶಾಸಕರು ಬಂದಿದ್ದರು, ಬಂದಿಲ್ಲ ಎಂಬ ಬಗ್ಗೆ ನನ್ನ ಬಳಿ ಹಾಜರಾತಿ ಇದೆ ಎಂದು ತಿರುಗೇಟು ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅ.1ರಿಂದ ಜನವರಿ 31ರ ವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ
ಕಂದಾಯ ಸಚಿವ ಕೃಷ್ಣಬೈರೇಗೌಡ ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿರುವ ಗಂಭೀರ ಆರೋಪ