ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ: ನಿಮ್ ಸಚಿವರ ರೂಮ್ ಸಂಖ್ಯೆ ತಿಳ್ಕೊಳ್ಳಿ

Published : Aug 21, 2019, 09:09 PM IST
ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ: ನಿಮ್ ಸಚಿವರ ರೂಮ್ ಸಂಖ್ಯೆ ತಿಳ್ಕೊಳ್ಳಿ

ಸಾರಾಂಶ

ಸಿಎಂ ಬಿ. ಎಸ್. ಯಡಿಯೂರಪ್ಪ ಸರ್ಕಾರದ 17 ಶಾಸಕರು ಮಂಗಳವಾರ ಸಚಿವಾರಗಿ ಪ್ರಮಾಣ ವಚನ ಸ್ವೀಕರಿಸಿದ್ದು, 17 ಕ್ಯಾಬಿನೆಟ್ ಸಚಿವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಆಫೀಸ್ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ನಿಮ್ ಸಚಿವರ ಕೊಠಡಿ ಸಂಖ್ಯೆ ಎಷ್ಟು ಎನ್ನುವುದನ್ನು ತಿಳಿದುಕೊಳ್ಳಿ

ಬೆಂಗಳೂರು, [ಆ.21]: ಕೊನೆಗೂ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆಯಾಗಿದೆ.  ನಿನ್ನೆ [ಮಂಗಳವಾರ] ರಾಜಭವನದ ಗಾಜಿನ ಮನೆಯಲ್ಲಿ 17 ಶಾಸಕರು ಕ್ಯಾಬಿನೆಟ್ ಸಚಿವರುಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಆದ್ರೆ ಯಾರಿಗೆ ಯಾವ ಖಾತೆ ಎನ್ನುವುದು ಮಾತ್ರ ಇನ್ನು ಹಂಚಿಕೆಯಾಗಿಲ್ಲ.  ಹಾಗೂ ನೂತನ ಸಚಿವರುಗಳಿಗೆ ಸರ್ಕಾರಿ ನಿವಾಸಗಳು ಸಹ ಇನ್ನು ಫೈನಲ್ ಆಗಿಲ್ಲ. ರಾಜ್ಯದಲ್ಲಿ ಉಂಟಾಗಿರುವ ನೆರೆ ಪ್ರವಾಹಕ್ಕೆ ಮೊದಲು ಆಧ್ಯತೆ ನೀಡಿರುವ ಸರ್ಕಾರ, ನೂತನ ಸಚಿವರುಗಳೆಲ್ಲರೂ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದಾರೆ.

ನೂತನ ಸಚಿವರನ್ನು ಸಂಪರ್ಕಿಸ್ಬೇಕಾ? ಇಲ್ಲಿದೆ ಸುಲಭ ಐಡಿಯಾ!

ಇತ್ತ ಸಿಎಂ ಯಡಿಯೂರಪ್ಪ ಅವರು ತಮ್ಮ 17 ಸಚಿವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಆಫೀಸ್ ಕೊಠಡಿಗಳನ್ನು ಹಂಚಿಕೆ ಮಾಡಿ ಇಂದು [ಬುಧವಾರ] ಆದೇಶ ಹೊರಡಿಸಿದ್ದಾರೆ. ಈ ಸಂಖ್ಯೆಯ ಕೊಠಡಿಗೆ ಹೋದರೆ ಸಚಿವರನ್ನು ನೋಡಬಹುದು.ಎಲ್ಲರಿಗೂ ವಿಧಾನಸೌಧದಲ್ಲಿ ಪ್ರವೇಶವಿರುವುದಿಲ್ಲ. ಇದಕ್ಕೆ ಸಚಿವರ ಕೊಠಡಿಯಿಂದ ಅನುಮತಿ ಪಾಸ್ ಪಡೆದಿರಬೇಕು. ಯಾರಿಗೆ ಎಷ್ಟನೇ ನಂಬರಿನ ಕೊಠಡಿ? ಈ ಕೆಳಗಿನಂತಿದೆ ಪಟ್ಟಿ.


1.  ಗೋವಿಂದ ಕಾರಜೋಳ-340,340ಎ-ವಿಧಾನಸೌಧ
2.  ಅಶ್ವತ್ಥ್ ನಾರಾಯಣ್-242,243-ವಿಧಾನಸೌಧ
3. ಲಕ್ಷ್ಮಣ್ ಸವದಿ-301,301ಎ-ವಿಧಾನಸೌಧ
4. ಕೆ.ಎಸ್.ಈಶ್ವರಪ್ಪ-329,329ಎ-ವಿಧಾನಸೌಧ
5. ಆರ್.ಅಶೋಕ್-317,317ಎ-ವಿಧಾನಸೌಧ
6. ಜಗದೀಶ್ ಶೆಟ್ಟರ್-315,315ಎ-ವಿಧಾನಸೌಧ
7. ಶ್ರೀರಾಮುಲು-328,328ಎ-ವಿಧಾನಸೌಧ
8. ಸುರೇಶ್ ಕುಮಾರ್-262,262ಎ-ವಿಧಾನಸೌಧ
9. ವಿ.ಸೋಮಣ್ಣ-314,314ಎ-ವಿಧಾನಸೌಧ
10. ಸಿ.ಟಿ.ರವಿ-344,344ಎ-ವಿಧಾನಸೌಧ
11. ಬಸವರಾಜ ಬೊಮ್ಮಾಯಿ-327,327ಎ-ವಿಧಾನಸೌಧ
12. ಕೋಟಾ ಶ್ರೀನಿವಾಸ್ ಪೂಜಾರಿ-336,336ಎ-ವಿಧಾನಸೌಧ
13.  ಮಾಧುಸ್ವಾಮಿ-316,316ಎ-ವಿಧಾನಸೌಧ
14. ಸಿ.ಸಿ.ಪಾಟೀಲ್-305,305ಎ-ವಿಧಾನಸೌಧ
15.  ಎಚ್.ನಾಗೇಶ್-342-343-ವಿಕಾಸಸೌಧ
16. ಪ್ರಭು ಚವ್ಹಾಣ್-143-146-ವಿಕಾಸಸೌಧ
17. ಶಶಿಕಲಾ ಜೊಲ್ಲೆ-ನಿಪ್ಪಾಣಿ-141,142-ವಿಕಾಸಸೌಧ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ