ಕಗ್ಗಂಟಾದ ವಿಸ್ತರಣೆಯಿಂದ 8 ಸಚಿವರಿಗೆ ಖಾತೆ ಹಂಚಿಕೆ ಇಲ್ಲ

Published : Dec 24, 2018, 07:44 AM IST
ಕಗ್ಗಂಟಾದ ವಿಸ್ತರಣೆಯಿಂದ 8 ಸಚಿವರಿಗೆ ಖಾತೆ ಹಂಚಿಕೆ ಇಲ್ಲ

ಸಾರಾಂಶ

ಕರ್ನಾಟಕದಲ್ಲಿ ಖಾತೆ ಹಂಚಿಕೆ ವಿಚಾರ ಕಗ್ಗಂಟಾಗಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇದೇ ವಿಚಾರವಾಗಿ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.

ಕಗ್ಗಂಟಾದ ವಿಸ್ತರಣೆಯಿಂದ 8 ಸಚಿವರಿಗೆ ಖಾತೆ ಹಂಚಿಕೆ ಇಲ್ಲ

 ಬೆಂಗ​ಳೂರು :  ಕಗ್ಗಂಟಾ​ಗಿ​ರುವ ಖಾತೆ ಹಂಚಿಕೆಯ ಸಮಸ್ಯೆಯನ್ನು ಬಗೆ​ಹ​ರಿ​ಸಲು ಕಾಂಗ್ರೆಸ್‌ ರಾಜ್ಯ ಉಸ್ತು​ವಾರಿ ಕೆ.ಸಿ.ವೇಣು​ಗೋಪಾಲ್‌ ಸೋಮ​ವಾರ ರಾತ್ರಿ ಬೆಂಗ​ಳೂ​ರಿಗೆ ಆಗ​ಮಿ​ಸುವ ನಿರೀ​ಕ್ಷೆ​ಯಿದ್ದು, ಅಲ್ಲಿ​ಯ​ವ​ರೆಗೂ ಎಂಟು ಮಂದಿ ನೂತನ ಸಚಿ​ವ​ರಿಗೆ ಖಾತೆ ಹಂಚಿಕೆ ನಡೆ​ಯು​ವು​ದಿಲ್ಲ ಎಂದು ಕಾಂಗ್ರೆ​ಸ್‌ನ ಉನ್ನತ ಮೂಲ​ಗಳು ತಿಳಿ​ಸಿ​ವೆ.

ಎರಡು ಹಾಗೂ ಎರ​ಡಕ್ಕೂ ಹೆಚ್ಚು ಪ್ರಮುಖ ಖಾತೆ​ಗ​ಳನ್ನು ಹೊಂದಿ​ರುವ ಪ್ರಭಾ​ವಿ​ ಸಚಿ​ವರು ತಮ್ಮ ಪ್ರಮುಖ ಖಾತೆ​ಗ​ಳನ್ನು ಬಿಟ್ಟು​ಕೊ​ಡಲು ಒಪ್ಪ​ದಿ​ರು​ವು​ದ​ರಿಂದ ಖಾತೆ ಹಂಚಿಕೆ ಕಗ್ಗಂಟು ನಿರ್ಮಾ​ಣ​ವಾ​ಗಿ​ದೆ. ರಾಜ್ಯ ಉಸ್ತು​ವಾರಿ ಕೆ.ಸಿ.ವೇಣು​ಗೋ​ಪಾಲ್‌, ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಹಾಗೂ ಉಪ ಮುಖ್ಯ​ಮಂತ್ರಿ ಡಾ. ಜಿ.ಪರ​ಮೇ​ಶ್ವರ್‌ ನಡುವೆ ಸಭೆ ನಡೆದ ನಂತ​ರವೇ ಈ ಕಗ್ಗಂಟು ಬಗೆ​ಹ​ರಿ​ಯ​ಬೇ​ಕಿದೆ. ಸೋಮ​ವಾ​ರ ರಾತ್ರಿ ಅಥವಾ ಮಂಗ​ಳ​ವಾರ ಬೆಳಗ್ಗೆ ಇಂತ​ಹ​ದೊಂದು ಸಭೆ ನಡೆ​ಯುವ ಸಾಧ್ಯ​ತೆ​ಯಿದ್ದು, ಅಲ್ಲಿ​ಯ​ವ​ರೆಗೂ ಖಾತೆ ಹಂಚಿಕೆ ನಡೆ​ಯುವ ಸಾಧ್ಯ​ತೆ​ಯಿಲ್ಲ ಎಂದು ತಿಳಿ​ದು​ಬಂದಿ​ದೆ.

ಸಚಿವ ಸಂಪು​ಟಕ್ಕೆ ಹೊಸ​ದಾಗಿ ಎಂಟು ಸಚಿ​ವರು ಸೇರ್ಪ​ಡೆ​ಯಾ​ಗಿ​ರು​ವು​ದ​ರಿಂದ ಕಾಂಗ್ರೆಸ್‌ನ ಹಾಲಿ ಸಚಿವರು ಹೊಂದಿ​ರುವ ಹೆಚ್ಚು​ವರಿ ಖಾತೆ​ಗಳ ಪುನರ್‌ ಹಂಚಿಕೆ ನಡೆ​ಯ​ಬೇಕು. ಕಾಂಗ್ರೆ​ಸ್‌ನ ಸಚಿ​ವರ ಬಳಿ ಇರುವ ಹೆಚ್ಚು​ವರಿ ಖಾತೆ​ಗಳ ಸಂಖ್ಯೆ 12 ಇದೆ. ಇದನ್ನು 8 ಸಚಿ​ವ​ರಿಗೆ ಹಂಚ​ಬೇ​ಕಿದೆ. ಆದರೆ, ಒಂದ​ಕ್ಕಿಂತ ಹೆಚ್ಚು ಪ್ರಮುಖ ಖಾತೆ ಹೊಂದಿ​ರುವ ಕೆಲ ಪ್ರಭಾವಿ ಸಚಿ​ವರು ತಮ್ಮ ಹೆಚ್ಚು​ವರಿ ಖಾತೆ​ಯನ್ನು ಬಿಟ್ಟು​ಕೊ​ಡಲು ಒಪ್ಪು​ತ್ತಿಲ್ಲ. ಈ ಸಚಿ​ವ​ರನ್ನು ಒಪ್ಪಿ​ಸುವ ಅಥವಾ ಪರ್ಯಾಯ ಮಾರ್ಗ ಕಂಡು​ಕೊ​ಳ್ಳ​ಬೇ​ಕಾದ ಅನಿ​ವಾ​ರ್ಯತೆ ಇದೆ. ಈ ಹಿನ್ನೆ​ಲೆ​ಯಲ್ಲಿ ವೇಣು​ಗೋ​ಪಾಲ್‌ ನಗ​ರಕ್ಕೆ ಸೋಮ​ವಾರ ಸಂಜೆ ಆಗ​ಮಿ​ಸ​ಲಿ​ದ್ದಾರೆ ಎಂದು ತಿಳಿದು ಬಂದಿ​ದೆ.

ಇದೇ ವೇಳೆ ಅವರು ಕಾಂಗ್ರೆ​ಸ್‌ನ ಅತೃಪ್ತ ಶಾಸ​ಕ​ರನ್ನು ಭೇಟಿ ಮಾಡಿ ಅವರ ಅಸ​ಮಾ​ಧಾನ ಪರಿ​ಹ​ರಿ​ಸುವ ಪ್ರಯ​ತ್ನ​ವನ್ನು ನಡೆ​ಸ​ಲಿ​ದ್ದಾರೆ ಎಂದು ಮೂಲ​ಗಳು ಹೇಳಿ​ವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ