
ನವದೆಹಲಿ(ಜ.10): ಒಂದೇ ಬಾರಿ 104 ಉಪಗ್ರಹಗಳನ್ನು ಅಂತರಿಕ್ಷ ಕಕ್ಷೆಗೆ ಉಡಾವಣೆಗೊಳಿಸಿದ ಕ್ಷಿಪಣಿ ತಜ್ಞ ಕೆ.ಶಿವನ್ ಅವರು ನೂತನ ಇಸ್ರೋ ಅಧ್ಯಕ್ಷರಾಗಿ ನೇಮಕರಾಗಿದ್ದಾರೆ. ಹಾಲಿ ಅಧ್ಯಕ್ಷ ಕನ್ನಡಿಗ ಎ.ಎಸ್. ಕಿರಣ್ ಕುಮಾರ್ ಅವರ ಅವಧಿ ಜನವರಿ 14ರಂದು ಕೊನೆಗೊಳ್ಳಲಿದೆ.
ಐಐಟಿ ಬಾಂಬೆಯ ಪದವೀಧರರಾಗಿರುವ ಶಿವನ್ ಅವರು ಪ್ರಸ್ತುತ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯಿ ಅಂತರಿಕ್ಷ ಕೇಂದ್ರದ ನಿರ್ದೇಶಕರಾಗಿದ್ದಾರೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಶಿವನ್ ಅವರ ನೇತೃತ್ವದಲ್ಲಿ ಇಸ್ರೋ ಏಕ ಕಾಲದಲ್ಲಿ ಇಸ್ರೋ ಕಕ್ಷೆಗೆ 104 ಉಪಗ್ರಹಗಳನ್ನು ಉಡಾವಣೆಗೊಳಿಸಿ ದಾಖಲೆ ನಿರ್ಮಿಸಲಾಗಿತ್ತು.
ವಿಕ್ರಂ ಸಾರಾಭಾಯಿ, ಸತೀಶ್ ಧವನ್ ಹಾಗೂ ಯು.ಆರ್. ರಾವ್'ರಂಥ ಹಲವು ಮೇರು ಸಾಧಕರು ನಿರ್ವಹಿಸಿದ ಸ್ಥಾನದಲ್ಲಿ ನನ್ನನ್ನು ನೇಮಿಸುವುದಕ್ಕೆ ನಾನು ನಿಜವಾಗಲು ವಿನೀತ. ನನ್ನ ಆಡಳಿತಾವಧಿಯಲ್ಲಿ ಇಸ್ರೋ ವತಿಯಿಂದ ಅಂತರಿಕ್ಷಕ್ಕೆ ವಿನೂತನ ಉಪಗ್ರಹವನ್ನು ಸೇರಿಸುವುದು ನನ್ನ ಕನಸಾಗಿದೆ. ಹಾಸನ ಮೂಲದ ಕನ್ನಡಿಗ ಎ.ಎಸ್.ಕಿರಣ್ ಕುಮಾರ್ ಅವರು ಜನವರಿ 12, 2015ರಂದು ಇಸ್ರೋ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.