ಕಾರ್ಟೂನ್ ಚಾನೆಲ್’ಗಳಲ್ಲಿ ಜಂಕ್ ಫುಡ್ ಜಾಹಿರಾತು ನಿಷೇಧ

Published : Feb 08, 2018, 03:36 PM ISTUpdated : Apr 11, 2018, 01:01 PM IST
ಕಾರ್ಟೂನ್ ಚಾನೆಲ್’ಗಳಲ್ಲಿ  ಜಂಕ್ ಫುಡ್ ಜಾಹಿರಾತು ನಿಷೇಧ

ಸಾರಾಂಶ

ಸರ್ಕಾರ ಇಂದು ಜಂಕ್ ಫುಡ್ ಸಂಬಂಧ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.  ಮಕ್ಕಳು ವೀಕ್ಷಿಸುವ ಕಾರ್ಟೂನ್ ಚಾನೆಲ್’ಗಳಲ್ಲಿ ಜಂಕ್ ಫುಡ್ ಜಾಹೀರಾತುಗಳಿಗೆ ನಿಷೇಧ ಹೇರಿದೆ.

ಬೆಂಗಳೂರು : ಸರ್ಕಾರ ಇಂದು ಜಂಕ್ ಫುಡ್ ಸಂಬಂಧ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.  ಮಕ್ಕಳು ವೀಕ್ಷಿಸುವ ಕಾರ್ಟೂನ್ ಚಾನೆಲ್’ಗಳಲ್ಲಿ ಜಂಕ್ ಫುಡ್ ಜಾಹೀರಾತುಗಳಿಗೆ ನಿಷೇಧ ಹೇರಿದೆ.

ಇದಕ್ಕೆ ಪ್ರಮುಖ ಕಾರಣವೇನೆಂದರೆ  ನೋಡುವುದಕ್ಕೂ – ತಿನ್ನುವ ಅಭ್ಯಾಸಕ್ಕೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಸರ್ಕಾರದಿಂದ  ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಜಂಕ್ ಫುಡ್ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಹಾನಿಕಾರಕವಾಗಿರುತ್ತದೆ. ಅದರಂತೆ ಮಕ್ಕಳ ಕಾರ್ಟೂನ್ ಚಾನೆಲ್’ಗಳಲ್ಲಿ  ಜಂಕ್ ಫುಡ್’ಗಳ ಜಾಹಿರಾತನ್ನು ನೋಡುವುದೂ ಕೂಡ ಹೆಚ್ಚಿನ ಜಂಕ್ ಫುಡ್ ಸೇವನೆಗೆ ಕಾರಣವಾಗುತ್ತದೆ.

ಹೆಚ್ಚು ಹೆಚ್ಚು ಟಿವಿ ಜಾಹಿರಾತುಗಳಲ್ಲಿ ಜಂಕ್ ಫುಡ್ ಜಾಹಿರಾತುಗಳನ್ನು ನೋಡುವುದರಿಂದ ಹೆಚ್ಚು ಹೆಚ್ಚು ಜಂಕ್ ಫುಡ್ ಸೇವನೆ ಮಾಡಲು ಅವಕಾಶವಾಗುತ್ತದೆ. ನೋಡುವುದರಿಂದ ಜಂಕ್ ಫುಡ್ ಸೇವನೆಯ ಅವಕಾಶವು 500 ಪಟ್ಟು ಅಧಿಕವಾಗಿರುತ್ತದೆ. 

ಜಾಹಿರಾತುಗಳಿಗೂ – ತಿನ್ನುವ ಅಭ್ಯಾಸಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಬ್ರಿಟನ್ ಕ್ಯಾನ್ಸರ್ ರೀಸರ್ಚ್ ಸಂಸ್ಥೆ ನಡೆಸಿದ ಅಧ್ಯಯನದ ವೇಳೆ ತಿಳಿದು ಬಂದಿದೆ.

ಟಿವಿ ಜಾಹಿರಾತುಗಳಲ್ಲಿ  ಜಂಕ್ ಫುಡ್,  ಕೊಕಕೋಲಾ ಜಾಹೀರಾತುಗಳನ್ನು ಪ್ರಸಾರ ಮಾಡಬಾರದು ಈ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿದೆ.  

ಜಂಕ್’ಫುಡ್ ಸೇವನೆಯ ಪರಿಣಾಮ :   ಇದರಿಂದ ಮಕ್ಕಳಲ್ಲಿ ಸ್ಥೂಲಕಾಯ ಬರುವುದಲ್ಲದೇ. ವಿವಿಧ ರೀತಿಯ ರೋಗಗಳಿಗೂ ಕೂಡ ಆಹ್ವಾನ ನೀಡಿದಂತಾಗುತ್ತದೆ. ಮುಖ್ಯವಾಗಿ ಕ್ಯಾನ್ಸರ್’ನಂತಹ ಮಾರಕ ರೋಗಗಳೂ ಕೂಡ ಬರಬಹುದಾದ ಸಾಧ್ಯತೆಗಳು ಹೆಚ್ಚಿರುತ್ತದೆ.

ಅಲ್ಲದೇ ಡಯಾಬಿಟೀಸ್, ಹೆಚ್ಚಿನ ರಕ್ತದೊತ್ತಡ,  ಸಂದು ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ ಆದ್ದರಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಕ್ಕಳು ವೀಕ್ಷಿಸುವ ಚಾನಲ್’ಗಳಲ್ಲಿ  ಜಂಕ್ ಫುಡ್ ಜಾಹಿರಾತುಗಳನ್ನು ನಿಷೇಧಿಸಲು ಸೂಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಬ್ಬಾ ಟಿವಿ ಅಂತಾ ಗುಜರಿಗೆ ಕೊಡುವ ಮುನ್ನ ಈ ಲೇಖನ ಓದಿ, ನಿಮ್ಮ ಮಿನಿ ಥಿಯೇಟರ್, ಸೆಕ್ಯೂರಿಟಿ ಗಾರ್ಡ್ ಇಲ್ಲೇ ಅಡಗಿದೆ!
ರೋಡ್‌ ಕಟಿಂಗ್‌ ಪರ್ಮಿಷನ್‌ಗೆ ಲಂಚ ಕೇಳಿದ ಅಧಿಕಾರಿ, ಬೆಂಗಳೂರಿನ ಭ್ರಷ್ಟಾಚಾರ ಕಂಡು ಕಂಗಾಲಾದ ಸ್ಟಾರ್ಟ್‌ಅಪ್‌ ಫೌಂಡರ್‌!