ಜೆಡಿಯುನಲ್ಲಿ ಮುಂದುವರಿದ ಉಚ್ಛಾಟನಾ ಸರಣಿ

Published : Aug 14, 2017, 03:58 PM ISTUpdated : Apr 11, 2018, 12:49 PM IST
ಜೆಡಿಯುನಲ್ಲಿ ಮುಂದುವರಿದ ಉಚ್ಛಾಟನಾ ಸರಣಿ

ಸಾರಾಂಶ

ನಿತೀಶ್ ಕುಮಾರ್ ಮಹಾಮೈತ್ರಿಯನ್ನು ತ್ಯಜಿಸಿ ಎನ್’ಡಿಏ ಸೇರಿದ ಬಳಿಕ ಪಕ್ಷದಲ್ಲಿ ಉಚ್ಚಾಟನಾ ಸರಣಿ ಮುಂದುವರೆದಿದ್ದು, ಇದೀಗ 21 ಮಂದಿ ಸದಸ್ಯರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಉಚ್ಛಾಟಿಸಲಾಗಿದೆ.

ನವದೆಹಲಿ: ನಿತೀಶ್ ಕುಮಾರ್ ಮಹಾಮೈತ್ರಿಯನ್ನು ತ್ಯಜಿಸಿ ಎನ್’ಡಿಏ ಸೇರಿದ ಬಳಿಕ ಪಕ್ಷದಲ್ಲಿ ಉಚ್ಚಾಟನಾ ಸರಣಿ ಮುಂದುವರೆದಿದ್ದು, ಇದೀಗ 21 ಮಂದಿ ಸದಸ್ಯರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಉಚ್ಛಾಟಿಸಲಾಗಿದೆ.

ಕಳೆದ ವಾರ ಪಕ್ಷದ ಹಿರಿಯ ನಾಯಕ ಶರದ್ ಯಾದವರನ್ನು ರಾಜ್ಯಸಭೆಯಲ್ಲಿ ಸಭಾನಾಯಕನ ಸ್ಥಾನದಿಂದ ಹಾಗೂ ಸಂಸದ ಅಲೀ ಅನ್ವರ್’ರನ್ನು ಪಕ್ಷವಿರೋಧಿ ಚಟುವಟಿಕೆಗಳ ಕಾರಣ ನೀಡಿ ಸಂಸದೀಯ ಮಂಡಳಿಯಿಂದ ವಜಾಗೊಳಿಸಲಾಗಿತ್ತು.

ಮಹಾಮೈತ್ರಿಯನ್ನು ತೊರೆದು ಎನ್’ಡಿಏ ಸೇರುವ ನಿತೀಶ್ ನಿರ್ಧಾರವನ್ನು ಶರದ್ ಯಾದವ್ ಹಾಗೂ ಅನ್ವರ್ ಟೀಕಿಸಿದ್ದರು.

ಬಿಜೆಪಿಯನ್ನು ಸೋಲಿಸಲು ಬಿಹಾರದ ಜನರು ಮಹಾಮೈತ್ರಿಗೆ ಜನಾದೇಶ ನೀಡಿರುವ ಹಿನ್ನೆಲೆಯಲ್ಲಿ, ಮಹಾಮೈತ್ರಿಯಿಂದ ಹೊರಹೋಗಿ ಎನ್’ಡಿಏ ಸೇರುವುದು ಜನರಿಗೆ ದ್ರೋಹ ಬಗೆದಂತಾಗುವುದು ಎಂದು ಶರದ್ ಯಾದವ್ ಅಭಿಪ್ರಾಯಪಟ್ಟಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಟೋನ್ಮೆಂಟ್‌ ರೈಲು ನಿಲ್ದಾಣದ 371 ಮರ ಕಡಿಯಲು ಹೈಕೋರ್ಟ್‌ ತಡೆ, ತನ್ನ ಅನುಮತಿ ಇಲ್ಲದೆ ಏನೂ ಮಾಡುವಂತಿಲ್ಲವೆಂದು ಆರ್ಡರ್
ಸ್ಕೂಲ್ ಬಸ್‌ಗೆ ಡಿಕ್ಕಿ ಹೊಡೆದ ಗೂಡ್ಸ್ ವಾಹನ; 20 ವಿದ್ಯಾರ್ಥಿಗಳಿದ್ದ ಶಾಲಾ ವಾಹನ ಪಲ್ಟಿ!