ಜಯದೇವ ಆಸ್ಪತ್ರೆ ವೈದ್ಯರು ಹೇಳಿದ ಅಂಬಿ ಸೀಕ್ರೇಟ್

Published : Nov 25, 2018, 10:46 AM IST
ಜಯದೇವ ಆಸ್ಪತ್ರೆ ವೈದ್ಯರು ಹೇಳಿದ ಅಂಬಿ ಸೀಕ್ರೇಟ್

ಸಾರಾಂಶ

ನಟ ಅಂಬರೀಶ್ ಅವರ ಸ್ನೇಹಿತರು ಆಗಿದ್ದ ಜಯದೇವ ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಅಂಬರೀಶ್ ಅವರ ಬಗ್ಗೆ ಸೀಕ್ರೇಟ್ ಒಂದನ್ನು ಬಿಚ್ಚಿಟ್ಟಿದ್ದಾರೆ. 

ಬೆಂಗಳೂರು :  ಅಂಬರೀಷ್ ಅವರನ್ನ ನಾನು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿರುವಾಗಲಿಂದಲೂ ಬಲ್ಲೆ. ಆವಾಗ ಅವರು ಬಹುಶಃ ಚಿತ್ರರಂಗದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿರಲಿಲ್ಲ ಎಂದು ಜಯದೇವ ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಹೇಳಿದ್ದಾರೆ. 

ಸಣ್ಣಪುಟ್ಟ ಸೈಡ್ ರೋಲ್ಸ್ ಮಾಡ್ತಾ ಇದ್ರು. ಆಗ ನಾವು ಮೆಡಿಕಲ್ ಕಾಲೇಜಿನಲ್ಲಿದ್ದಾಗ ಹಾಸ್ಟೆಲಿನಲ್ಲಿ ಇದ್ವಿ. ಒಂದ್ ಸಲ ಅಂಬರೀಷ್ ಅವ್ರ ಗಂಟಲು ನೋವು, ಜ್ವರ, ಎದೆನೋವು ಅಂತ ದೀಪಕ್ ನರ್ಸಿಂಗ್ ಹೋಮ್‌ಗೆ ಅಡ್ಮಿಟ್ ಆಗಿದ್ರು. ಅಂತಹ ಸಂದರ್ಭದಲ್ಲಿ ನನ್ನನ್ನೂ ಕರೆದಿದ್ರು ನೋಡ್ಲಿಕ್ಕೆ. 

ಸಿನಿಮಾದಲ್ಲಿ ಫೈಟ್ ಮಾಡ್ತಿದ್ದ ಅವರು ಆಸ್ಪತ್ರೆಗೆ ರೋಗಿಯಾಗಿ ಆಸ್ಪತ್ರೆಗೆ ಬಂದ ಸಮಯದಲ್ಲಿ ಒಂದು ಸಣ್ಣ ಇಂಜೆಕ್ಷನ್ ಕಂಡ್ರೆ ಹೆದರ್ಕೊಳೋರು. ಅವರ ಹೃದಯ ಮಗುವಿನಂತೆ ಇತ್ತು ಎಂದು ಜಯದೇವ ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?