
ಶ್ರೀನಗರ: ರಫೇಲ್ ಯುದ್ಧವಿಮಾನ ಖರೀದಿ ಹಗರಣದ ಬಳಿಕ ಅನಿಲ್ ಅಂಬಾನಿ ಅವರ ರಿಲಯನ್ಸ್ ಈಗ ಇನ್ನೊಂದು ಹಗರಣದಲ್ಲಿ ಸಿಲುಕಿದೆ.
ಜಮ್ಮು- ಕಾಶ್ಮೀರದ ಸರ್ಕಾರಿ ಉದ್ಯೋಗಿಗಳ ಸಮೂಹ ವಿಮಾ ಪಾಲಿಸಿ ಗುತ್ತಿಗೆಯು ಅನಿಲ್ ಒಡೆತನದ ರಿಲಯನ್ಸ್ ಜನರಲ್ ಇನ್ಷೂರನ್ಸ್ ಕಂಪನಿ ಪಾಲಾ ಗಿದ್ದನ್ನು ‘ಅಕ್ರಮ’ ಎಂದಿರುವ ರಾಜ್ಯಪಾಲ ಸತ್ಯಪಾಲ್ ಮಲಿಕ್, ಟೆಂಡರ್ ರದ್ದುಗೊಳಿಸುವ ಆದೇಶ ಹೊರಡಿಸಿದ್ದಾರೆ.
ಇದು ರಾಜ್ಯ ವಿತ್ತ ಸಚಿವಾಲಯ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಇದೇ ವೇಳೆ, ರಫೇಲ್ ವಿಮಾನ ನಿರ್ಮಾಣದಲ್ಲಿ ಪಾಲುದಾರಿಕೆ ಕಾರಣಕ್ಕೆ ಮುಜುಗರ ಅನುಭವಿಸಿದ್ದ ಅನಿಲ್ ಅಂಬಾನಿಗೆ ಈ ಇದರಿಂದ ಮತ್ತೊಮ್ಮೆ ಇರಿಸು-ಮುರುಸಾಗಿದೆ.
ವಿವಾದ ಏನು?: ಜಮ್ಮು-ಕಾಶ್ಮೀರದಲ್ಲಿರುವ ಸುಮಾರು 4 ಲಕ್ಷ ಸರ್ಕಾರಿ ನೌಕರರಿಗೆ ವಿಮೆ ಕಡ್ಡಾಯ. ಆದರೆ ರಿಲಯನ್ಸ್ಗೆ ಇದರ ಗುತ್ತಿಗೆ ನೀಡುವಾಗಬಹಿರಂಗ ಟೆಂಡರ್ ಕರೆದಿಲ್ಲ. ಅಧಿಕಾರಿಗಳೇ ನಾಮ್ಕೆ ವಾಸ್ತೆ ಕಂಪನಿ ರಚಿಸಿ ರಿಲಯನ್ಸ್ ಜತೆಗೆ ಟೆಂಡರ್ನಲ್ಲಿ ‘ಸ್ಪರ್ಧೆ’ ಗೆ
ಬಿಟ್ಟಿದ್ದರು. ಕೊನೆಗೆ ಟೆಂಡರ್ ರಿಲಯನ್ಸ್ ಪಾಲಾಯಿತು ಎಂಬುದು ಆರೋಪ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.