ಶರತ್ ಸಾವನ್ನು ಮುಚ್ಚಿಟ್ಟು ಕಾಂಗ್ರೆಸ್ ಸಮಾವೇಶ ನಡೆಸಿದರಾ ಮುಖ್ಯಮಂತ್ರಿಗಳು? ಪುಷ್ಟಿ ನೀಡುವಂತಿದೆ ಆಸ್ಪತ್ರೆ ವರದಿ

By Suvarna Web DeskFirst Published Jul 13, 2017, 6:00 PM IST
Highlights

ಆರ್'ಎಸ್’ಎಸ್ ಕಾರ್ಯಕರ್ತ ಶರತ್ ಸಾವನ್ನು ಮುಚ್ಚಿಟ್ಟು ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿ ಸಮಾವೇಶ ನಡೆಸಿದರಾ? ಇಂಥದ್ದೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಮಂಗಳೂರು (ಜು.13): ಆರ್'ಎಸ್’ಎಸ್ ಕಾರ್ಯಕರ್ತ ಶರತ್ ಸಾವನ್ನು ಮುಚ್ಚಿಟ್ಟು ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿ ಸಮಾವೇಶ ನಡೆಸಿದರಾ? ಇಂಥದ್ದೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಜುಲೈ 4 ನೇ ತಾರೀಖು ರಾತ್ರಿ ಶರತ್ ಮೇಲೆ ಹಲ್ಲೆಯಾಗುತ್ತದೆ. 2 ದಿನಗಳ ಕಾಲ ವೈದ್ಯರು ಅವರನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ದುರಾದೃಷ್ಟವಶಾತ್  6 ನೇ ತಾರೀಖು ರಾತ್ರಿ 12.30 ಕ್ಕೆ ಶರತ್ ವಿಧಿವಶರಾಗುತ್ತಾರೆ. ಈ ವಿಚಾರವನ್ನು ಆಸ್ಪತ್ರೆ ಸಿಬ್ಬಂದಿ ಶರತ್ ಮನೆಯವರಿಗಾಗಲಿ, ತಂದೆ-ತಾಯಿಗಾಗಲಿ ತಿಳಿಸುವುದಿಲ್ಲ. ಜು. 7 ನೇ ತಾರೀಖು ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶ ಇದ್ದ ಕಾರಣ ಸಿಎಂ ಸಿದ್ದರಾಮಯ್ಯ ಆಗಮನದ ಹಿನ್ನಲೆಯಲ್ಲಿ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ಸಮಾವೇಶ ನಡೆಸಲಾಗಿದೆ. ಸಿದ್ದರಾಮಯ್ಯನವರು ಸಮಾವೇಶ ಮುಗಿಸಿ ವಿಮಾನ ಹತ್ತಿ ಹೊರಟು ಹೋದ ಮೇಲೆ 7 ನೇ ತಾರೀಖಿನ ರಾತ್ರಿ 8.30 ರ ಸುಮಾರಿಗೆ ಸಾವಿನ ವಿಚಾರವನ್ನು ಬಹಿರಂಗಪಡಿಸಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆಯ ವರದಿ ಹರಿದಾಡುತ್ತಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ.

Latest Videos

ಮಗನ ಸಾವಿನ ವಿಚಾರ ತಿಳಿಯದ ಅವರ ತಾಯಿ ದೇವಸ್ಥಾನಗಳಿಗೆ ಹೋಗಿ ಮಗ ಬದುಕಲೆಂದು ಪೂಜೆ-ಪುನಸ್ಕಾರ, ಹರಕೆಯನ್ನು ಹೊರುತ್ತಾರೆ. ಮಗನ ಅಂಗಾಂಗಗಳನ್ನು ದಾನ ಮಾಡಬೇಕೆಂದು ತಂದೆ-ತಾಯಿಗಳಿಗೆ ಆಸೆಯಿತ್ತು. ಆದರೆ ಹೆಚ್ಚು ಕಡಿಮೆ ಒಂದು ದಿನ ತಡವಾಗಿ ಸಾವಿನ ವಿಚಾರ ತಿಳಿಸಿದ್ದರಿಂದ ಅದಕ್ಕೂ ಅವಕಾಶ ಸಿಗದಂತಾಯಿತು. ಸಿಎಂ ಸಿದ್ದರಾಮಯ್ಯನವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

 

 

click me!