
ಬೆಂಗಳೂರು(ಅ. 11): ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತೆ ಅನ್ನೋ ಕಾರಣಕ್ಕಾಗಿ ಸುಪ್ರೀಂಕೋರ್ಟ್ ದೆಹಲಿಯಲ್ಲಿ ಪಟಾಕಿ ಮಾರಬಾರದು ಅಂತಾ ಆದೇಶ ಹೊರಡಿಸಿದೆ.
ಇದಕ್ಕೆ ಈಗಾಗಲೇ ಪರ ವಿರೋಧ ವ್ಯಕ್ತವಾಗಿದೆ. ಅಲ್ಲದೆ ದೊಡ್ಡ ಚರ್ಚೆಗೂ ನಾಂದಿ ಹಾಡಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ, ಚಂಡೀಗಡದಲ್ಲೂ ಪಟಾಕಿ ನಿಷೇಧ ಮಾಡುವ ಕುರಿತು ಒಲವು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲೂ ಸುವರ್ಣನ್ಯೂಸ್ ಪಟಾಕಿ ಬ್ಯಾನ್ ಆಗ್ಬೇಕ್ ಅನ್ನೋ ಅಭಿಯಾನ ಶುರು ಮಾಡಿದೆ.
ಇವತ್ತು ಇಡೀ ದಿನ ಪಟಾಕಿ ಬ್ಯಾನ್ ಆಗ್ಬೇಕು ಅನ್ನೋದರ ಕುರಿತು ಅಭಿಯಾನ ನಡೆಯಲಿದೆ. ನೀವು ಕೂಡಾ ದೆಹಲಿಯಲ್ಲಿ ಆದಂತೆ ಬೆಂಗಳೂರಿನಲ್ಲೂ ಪಟಾಕಿ ನಿಷೇಧ ಮಾಡಬೇಕೋ ಬೇಡವೋ ಅನ್ನೋದರ ಬಗ್ಗೆ ಅಭಿಪ್ರಾಯ ಸಲ್ಲಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.