ರಾಜ್ಯಪಾಲರು ಕೇವಲ ಕೈಗೊಂಬೆ ಮಾತ್ರವೇ?: ಪ್ರಶ್ನೆ ಪತ್ರಿಕೆ ವಿವಾದ

Published : Jul 16, 2019, 11:14 AM ISTUpdated : Jul 16, 2019, 11:23 AM IST
ರಾಜ್ಯಪಾಲರು ಕೇವಲ ಕೈಗೊಂಬೆ ಮಾತ್ರವೇ?: ಪ್ರಶ್ನೆ ಪತ್ರಿಕೆ ವಿವಾದ

ಸಾರಾಂಶ

ರಾಜ್ಯಪಾಲರು ಕೇವಲ ಕೈಗೊಂಬೆ ಮಾತ್ರವೇ?| ಬಿಹಾರ ಲೋಕಸೇವಾ ಆಯೋಗದ ಪ್ರಶ್ನೆ ಪತ್ರಿಕೆಯಲ್ಲಿ ವಿವಾದ| ಈ ಪ್ರಶ್ನೆ ಬಗ್ಗೆ ಬಿಹಾರ ವಿಪಕ್ಷ ಆರ್‌ಜೆಡಿಯಿಂದ ಆಕ್ರೋಶ|  ಪರಿಶೀಲಿಸಿ ಮುಂದಿನ ಕ್ರಮ ಎಂದ ಬಿಹಾರದ ಶಿಕ್ಷಣ ಸಚಿವ

ಪಟನಾ[ಜು.16]: ಸಾಂವಿಧಾನಿಕ ರಾಜ್ಯಪಾಲರ ಹುದ್ದೆ ಕುರಿತು ಅವಹೇಳನಕಾರಿಯಾದ ಪ್ರಶ್ನೆಯೊಂದನ್ನು ಕೇಳುವ ಮೂಲಕ ಬಿಹಾರ ಲೋಕ ಸೇವಾ ಆಯೋಗ(ಬಿಪಿಎಸ್‌ಸಿ) ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಬಿಹಾರದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಬಿಹಾರ ಲೋಕಸೇವಾ ಆಯೋಗ ಭಾನುವಾರ ಪರೀಕ್ಷೆ ನಡೆಸಿತ್ತು. ಭಾರತದ ರಾಜ್ಯಗಳಲ್ಲಿ ಅದರಲ್ಲೂ ಪ್ರಮುಖವಾಗಿ ಬಿಹಾರದಲ್ಲಿ ರಾಜ್ಯಪಾಲರ ಕರ್ತವ್ಯವನ್ನು ವಿವರಿಸಿ. ಜೊತೆಗೆ ರಾಜ್ಯಪಾಲರು ಕೇವಲ ಕೈಗೊಂಬೆಯೇ ಎಂಬುದನ್ನು ವಿವರಿಸಿ ಎಂಬ ಪ್ರಶ್ನೆಯೊಂದನ್ನು ಬಿಹಾರ ಲೋಕ ಸೇವಾ ಆಯೋಗದ ಸಾಮಾನ್ಯ ಜ್ಞಾನದ ಎರಡನೇ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿತ್ತು. ಈ ವಿಷಯದ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಹಾರದ ಪ್ರತಿಪಕ್ಷವಾದ ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ, ‘’ರಾಜ್ಯಪಾಲರ ಗೌರವಕ್ಕೆ ಧಕ್ಕೆಯನ್ನುಂಟು ಮಾಡಲು ಈ ಪ್ರಶ್ನೆ ಕೇಳಲಾಗಿದೆ. ಇಂಥ ಪ್ರಶ್ನೆಯನ್ನು ಆಯ್ಕೆ ಮಾಡಿದವರನ್ನು ಗುರುತಿಸಬೇಕು. ಅಲ್ಲದೆ, ಅವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದೆ.

ಇನ್ನು ಈ ಕುರಿತು ಸ್ಪಷ್ಟನೆ ನೀಡಿದ ಬಿಹಾರ ಶಿಕ್ಷಣ ಸಚಿವ ಕೃಷ್ಣ ನಂದನ್‌ ಪ್ರಸಾದ್‌ ವರ್ಮಾ, ಬಿಹಾರ ಲೋಕ ಸೇವಾ ಆಯೋಗದ ಪ್ರಶ್ನೆ ಪತ್ರಿಕೆಯಲ್ಲಿ ಇಂಥ ಪ್ರಶ್ನೆ ಕೇಳಿರುವುದು ಆಘಾತಕಾರಿ. ಈ ಬಗ್ಗೆ ಎಲ್ಲ ಮಾಹಿತಿ ಪಡೆದು, ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!
ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್