
ಜಕಾರ್ತಾ(ಏ.24): ಭಾರತೀಯತೆ, ಭಾರತದ ಸಂಸ್ಕೃತಿ ಉಪಖಂಡವನ್ನೂ ದಾಟಿ ಏಷ್ಯಾ ಮತ್ತು ವಿಶ್ವದ ಇತರ ಖಂಡಗಳಲ್ಲಿ ಪಸರಿಸಿ ಶತಮಾನಗಳೇ ಉರುಳಿವೆ. ಭಾರತದ ಮಹಾನ್ ಧರ್ಮಗ್ರಂಥಗಳಾದ ಮಹಾಭಾರತ, ರಾಮಾಯಣದ ಕಥೆಗಳು, ಬೌದ್ಧ ಧರ್ಮವೂ ಸೇರಿದಂತೆ ನಮ್ಮ ಉದಾತ್ತ ಚಿಂತನೆಗಳು ಇಂದಿಗೂ ಜಗತ್ತಿಗೆ ಸಾಂಸ್ಕೃತಿಕ ಬುನಾದಿ ಹಾಕಿ ಕೊಡುತ್ತಿವೆ.
ಅದರಲ್ಲೂ ಇಂಡೋನೇಷ್ಯಾ ದಲ್ಲಿ ರಾಮಾಯಣದ ಕಥೆಗಳು ಭಾರೀ ಜನಪ್ರಿಯತೆಯನ್ನು ಪಡೆದಿವೆ. ರಾಮಾಯಣ ಅಲ್ಲಿನ ಸಾಂಸ್ಕೃತಿಕ ಲೋಕದ ಭಾಗವಾಗಿ ಶತಮಾನಗಳೇ ಉರುಳಿವೆ.
ಅದರಂತೆ ಶತಮಾನಗಳ ಸಾಂಸ್ಕೃತಿಕ ಅನುಬಂಧದ ಪ್ರತೀಕವಾಗಿ ಇಂಡೋನೇಷ್ಯಾ ಸರ್ಕಾರ ರಾಮಾಯಣದ ಅಂಚೆ ಚೀಟಿ ಬಿಡುಗಡೆ ಮಾಡಿದೆ.
ಭಾರತ-ಇಂಡೋನೇಷ್ಯಾ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 70ನೇ ವರ್ಷಾಚರಣೆ ಸ್ಮರಣಾರ್ಥವಾಗಿ ರಾಮಾಯಣ ಕಥಾವಸ್ತುವಿನ ಅಂಚೆ ಚೀಟಿಗಳನ್ನು ಇಂಡೋನೇಷ್ಯಾ ಸರ್ಕಾರ ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ 2018ರಲ್ಲಿ ಇಂಡೋನೇಷ್ಯಾಗೆ ಭೇಟಿ ನೀಡಿದ್ದ ವೇಳೆ ಉಭಯ ರಾಷ್ಟ್ರಗಳು ಈ ಕುರಿತು ಒಪ್ಪಂದ ಮಾಡಿಕೊಂಡಿದ್ದವು. ಅದರಂತೆ ಇಂಡೋನೇಷ್ಯಾ ಸರ್ಕಾರ ರಾಮಾಯಣದ ಅಂಚೆ ಚೀಟಿ ಬಿಡುಗಡೆ ಮಾಡಿ ಭಾರತದೊಂದಿಗಿನ ತನ್ನ ಶತಮಾನಗಳ ಸಂಬಂಧವನ್ನು ಸ್ಮರಿಸಿದೆ.
ಇಂಡೋನೇಷ್ಯಾದ ಪ್ರಸಿದ್ಧ ಶಿಲ್ಪಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಾಪಕ್ ನ್ಯೋಮನ್ ನುರಾತಾ ಈ ಅಂಚೆ ಚೀಟಿಯನ್ನು ವಿನ್ಯಾಸ ಮಾಡಿದ್ದು, ಸೀತಾಮಾತೆಯನ್ನು ರಕ್ಷಿಸಲು ಜಟಾಯು ಹೋರಾಡುತ್ತಿರುವ ಸನ್ನಿವೇಶವನ್ನು ಮುದ್ರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.