
ನವದೆಹಲಿ: ಬೆಲೆಯೇರಿಕೆ ತಲೆಬಿಸಿಯಲ್ಲಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಸ್ವಲ್ಪ ಆಶಾಭಾವನೆಯ ಅಂಕಿಸಂಖ್ಯೆಗಳು ಸೋಮವಾರ ಲಭ್ಯವಾಗಿವೆ. ಜನವರಿ ತಿಂಗಳ ಹಣದುಬ್ಬರ ಪ್ರಮಾಣ ಶೇ.5.07ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ಕೈಗಾರಿಕಾ ಉತ್ಪಾದನೆಯು ಶೇ.7.1ರ ದರದಲ್ಲಿ ಬೆಳವಣಿಗೆ ಕಂಡಿದೆ.
ಚಿಲ್ಲರೆ ಹಣದುಬ್ಬರವು ಡಿಸೆಂಬರ್ನಲ್ಲಿ 17 ತಿಂಗಳ ಗರಿಷ್ಠವಾದ ಶೇ.5.21ಕ್ಕೆ ಏರಿತ್ತು. ಈಗ ಇದರ ಪ್ರಮಾಣ ಶೇ.5.07ಕ್ಕೆ ತಗ್ಗಿದೆ. ತರಕಾರಿ, ಹಣ್ಣು ಹಾಗೂ ಇಂಧನ ಉತ್ಪನ್ನಗಳ ದರ ತಗ್ಗಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಕಳೆದ ವರ್ಷ ಜನವರಿಯಲ್ಲಿ ಇದರ ಪ್ರಮಾಣ ಶೇ.3.17ರಷ್ಟಿತ್ತು.
ಇದೇ ವೇಳೆ ಬಂಡವಾಳ ಸರಕು ಹಾಗೂ ಉತ್ಪಾದನಾ ವಲಯದ ಉತ್ತಮ ಪ್ರಗತಿಯ ಕಾರಣ ಕೈಗಾರಿಕಾ ಉತ್ಪಾದನಾ ಸೂಚ್ಯಂಕ 2017ರ ಡಿಸೆಂಬರ್ನಲ್ಲಿ ಶೇ.7.1ರ ದರದಲ್ಲಿ ಬೆಳವಣಿಗೆ ಕಂಡಿದೆ. ಇದು 2016ರ ಡಿಸೆಂಬರ್ನಲ್ಲಿ ಕೇವಲ ಶೇ.2.4ರ ದರದಲ್ಲಿ ಪ್ರಗತಿ ಕಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.