
ಉರಿ ದಾಳಿಯಲ್ಲಿ 18 ಮಂದಿ ಸೈನಿಕರನ್ನು ಪ್ರಾಣ ಕಳೆದುಕೊಂಡಿದ್ರು. ಈ ಘಟನೆ ನಡೆದ ಬೆನ್ನಲ್ಲೇ ಭಾರತದ ಯೋಧರು ಪಾಕಿಸ್ತಾನಕ್ಕೆ ಪದ್ಯವೊಂದರ ಮೂಲಕ ಎಚ್ಚರಿಕೆ ನೀಡುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮನೋಜ್ ಠಾಕೂರ್ ಎಂಬ ಸೈನಿಕ, ಕಾಶ್ಮೀರ್ ತೋ ಹೋಗಾ ಲೇಕಿನ್ ಪಾಕಿಸ್ತಾನ ನಹಿ ಹೋಗ ಎಂಬ ಪದ್ಯದ ಮೂಲಕ ಪಾಕ್'ಗೆ ಎಚ್ಚರಿಕೆ ನೀಡಿದ್ದರು.
ವೈರಲ್ ಆಗಿರೋ ವಿಡಿಯೋ ಪಾಕಿಸ್ತಾನ ಕೂಡ ತಲುಪಿದೆ. ಇದನ್ನ ಕಂಡ ಪಾಕ್ನ ಕೆಲ ಕಿಡಿಗೇಡಿಗಳು ಪಂದ್ಯ ಹೇಳಿದ ಯೋಧ ಮನೋಜ್ ಠಾಕೂರ್ಗೆ ಫೇಸ್ಬುಕ್ನಲ್ಲಿ ಬೆದರಿಕೆ ಮೆಸೇಜ್ ಮಾಡಿದ್ದಾರೆ. ಇಷ್ಟರಲ್ಲಿಯೇ ಪಾಕಿಸ್ತಾನ ನಿನ್ನನ್ನು ಕೊಲೆ ಮಾಡಲಿದೆ ಎಂದು ಬೆದರಿಕೆಯ ಸ್ಟೇಟಸ್'ನ್ನು ಫೇಸ್ಬುಕ್ಗೆ ಅಪೋಲೋಡ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.