ವಿಜಯ್ ಮಲ್ಯಗೆ ಮತ್ತೆ ಶುರುವಾಗಲಿದೆಯಾ ಕಂಟಕ? ಭಾರತಕ್ಕೆ ವಾಪಸ್ಸಾಗ್ತಾರಾ?

Published : May 02, 2017, 10:11 AM ISTUpdated : Apr 11, 2018, 12:48 PM IST
ವಿಜಯ್ ಮಲ್ಯಗೆ ಮತ್ತೆ ಶುರುವಾಗಲಿದೆಯಾ ಕಂಟಕ? ಭಾರತಕ್ಕೆ ವಾಪಸ್ಸಾಗ್ತಾರಾ?

ಸಾರಾಂಶ

ಉದ್ದೇಶಪೂರ್ವಕ  ಸುಸ್ಥಿದಾರರಾಗಿರುವ  ಉದ್ಯಮಿ ವಿಜಯ್ ಮಲ್ಯರವರಿಗೆ ಮತ್ತೆ ವಿಚಾರಣೆಯ ಬಿಸಿ ಶುರುವಾಗಲಿದೆ. ಜಾಮೀನು ಸಿಕ್ಕಿದೆ ಎಂದು ನಿರಾಳವಾಗಿರುವ ಮಲ್ಯರವರಿಗೆ ಮತ್ತೆ ತಲೆನೋವು ಶುರುವಾಗಲಿದೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಇಂದು ಲಂಡನ್ ಗೆ ತೆರಳಿದ್ದು, ಮಲ್ಯರವರ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಲಿದೆ. 

ನವದೆಹಲಿ (ಮೇ.02): ಉದ್ದೇಶಪೂರ್ವಕ  ಸುಸ್ಥಿದಾರರಾಗಿರುವ  ಉದ್ಯಮಿ ವಿಜಯ್ ಮಲ್ಯರವರಿಗೆ ಮತ್ತೆ ವಿಚಾರಣೆಯ ಬಿಸಿ ಶುರುವಾಗಲಿದೆ. ಜಾಮೀನು ಸಿಕ್ಕಿದೆ ಎಂದು ನಿರಾಳವಾಗಿರುವ ಮಲ್ಯರವರಿಗೆ ಮತ್ತೆ ತಲೆನೋವು ಶುರುವಾಗಲಿದೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಇಂದು ಲಂಡನ್ ಗೆ ತೆರಳಿದ್ದು, ಮಲ್ಯರವರ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಲಿದೆ. 

ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಇಂದು ಲಂಡನ್ ಗೆ ತೆರಳಿದ್ದು ಅಕ್ರಮ ಹಣದ ವಹಿವಾಟು ಪ್ರಕರಣ ಎದುರಿಸುತ್ತಿರುವ ಮಲ್ಯರವರ ವಿಚಾರಣೆಯನ್ನು ತ್ವರಿತಗೊಳಿಸಲು ನೆರವು ನೀಡಲಿದೆ. ಜೊತೆಗೆ ಅವರನ್ನು ಗಡಿಪಾರು ಮಾಡುವ ಬಗ್ಗೆ ಅಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ.

ಮಲ್ಯರವರ ಹಸ್ತಾಂತರ ವಿಚಾರ ಬ್ರಿಟಿಷ್ ನ್ಯಾಯಾಲಯದ ಮುಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಪ್ರಾಥಮಿಕ ನೆರವು ನೀಡಿದೆ. ನ್ಯಾಯಾಲಯದಲ್ಲಿ ಪ್ರಕರಣವನ್ನು ಇನ್ನಷ್ಟು ಬಲಪಡಿಸುವುದಕ್ಕಾಗಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವನ್ನು ಲಂಡನ್’ಗೆ ಕಳುಹಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ