ಮರಣದಂಡನೆ ನಿಷೇಧ ನಿರ್ಣಯಕ್ಕೆ ಭಾರತ ಆಕ್ಷೇಪ

Published : Nov 19, 2016, 04:48 PM ISTUpdated : Apr 11, 2018, 12:55 PM IST
ಮರಣದಂಡನೆ ನಿಷೇಧ ನಿರ್ಣಯಕ್ಕೆ ಭಾರತ ಆಕ್ಷೇಪ

ಸಾರಾಂಶ

‘‘ಪ್ರತಿಯೊಂದು ರಾಷ್ಟ್ರಕ್ಕೂ ತಮ್ಮ ಕಾನೂನು ವ್ಯವಸ್ಥೆ ಕುರಿತು ನಿರ್ಧರಿಸುವ ಅಧಿಕಾರವಿದೆ. ಹಾಗಾಗಿಯೇ ನೂತನ ತಿದ್ದುಪಡಿ ಪರ ಮತ ಚಲಾಯಿಸಿದ್ದೇವೆ’’  

ನವದೆಹಲಿ(ನ.19):  ಮರಣ ದಂಡನೆ ಮೇಲೆ ನಿಷೇಧ ಹೇರುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರತಿಯೊಂದು ರಾಷ್ಟ್ರಕ್ಕೂ ತಮ್ಮ ಕಾನೂನು ವ್ಯವಸ್ಥೆಯನ್ನು ಹೊಂದುವ ಪರಮಾಧಿಕಾರವಿದೆ ಮತ್ತು ಮರಣದಂಡನೆ ಮೇಲಿನ ನಿಷೇಧದ ವಿಶ್ವಸಂಸ್ಥೆಯ ನಿರ್ಣಯವು ಭಾರತದ ಶಾಸನಬದ್ಧ ಕಾನೂನಿಗೆ ವಿರುದ್ಧವಾಗಿದೆ ಎಂದು ಭಾರತ ಪ್ರತಿಪಾದಿಸಿದೆ. ಆದರೆ, ಆಂತರಿಕ ಕಾನೂನು ವ್ಯವಸ್ಥೆಯನ್ನು ತಿದ್ದುಪಡಿ ಮೂಲಕ ಅಭಿವೃದ್ಧಿಗೊಳಿಸುವ ಸಾರ್ವಭೌಮತ್ವಕ್ಕೆ ಭಾರತ ಬೆಂಬಲ ಸೂಚಿಸಿದೆ.

‘‘ಪ್ರತಿಯೊಂದು ರಾಷ್ಟ್ರಕ್ಕೂ ತಮ್ಮ ಕಾನೂನು ವ್ಯವಸ್ಥೆ ಕುರಿತು ನಿರ್ಧರಿಸುವ ಅಧಿಕಾರವಿದೆ. ಹಾಗಾಗಿಯೇ ನೂತನ ತಿದ್ದುಪಡಿ ಪರ ಮತ ಚಲಾಯಿಸಿದ್ದೇವೆ,’’ ಎಂದು ಭಾರತದ ಪ್ರತಿನಿ ಮಯಾಂಕ್ ಜೋಷಿ ಹೇಳಿದ್ದಾರೆ. ಆದರೆ, ವಿಶ್ವಸಂಸ್ಥೆಯ ನಿರ್ಣಯವು ಭಾರತದ ಶಾಸನಬದ್ಧ ಕಾನೂನನ್ನು ಉಲ್ಲಂಘಿಸುತ್ತದೆ. ಹಾಗಾಗಿ ನಿರ್ಣಯದ ವಿರುದ್ಧ ಮತ ಚಲಾಯಿಸಿರುವುದಾಗಿ ಭಾರತದ ನಿಯೋಗ ಹೇಳಿದೆ.

ನೂತನ ನಿರ್ಣಯದ ಪರ 115 ಮತಗಳು, 38 ಮತಗಳು ವಿರುದ್ಧವಾಗಿ ಮತ್ತು ತಟಸ್ಥ ಧೋರಣೆ ಪರ 31 ಮತಗಳು ಚಲಾವಣೆಯಾಗಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೌದು ನಾನು ಟಿ ಮಾರಾಟಗಾರ, ಕಾಂಗ್ರೆಸ್ AI ವಿಡಿಯೋಗೆ ಸೂಕ್ತ ಸ್ಥಳದಲ್ಲಿ ತಿರುಗೇಟು ಕೊಟ್ಟ ಮೋದಿ
ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ