
ಲಂಡನ್[ಮೇ.28): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಶ್ರೀಲಂಕಾಗೆ ಸಂಬಂಧಿಸಿದ ಸುಮಾರು 195 ರಹಸ್ಯ ಕಡತಗಳನ್ನು ಬ್ರಿಟನ್ ನ ವಿದೇಶಿ ಮತ್ತು ಕಾಮನವೆಲ್ತ್ ಕಚೇರಿ ನಾಶಪಡಿಸಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧ ಮತ್ತು ಎಲ್ಟಿಟಿಇ ಕಾರ್ಯಚಟುವಟಿಕೆ ಕುರಿತ ರಹಸ್ಯ ಮಾಹಿತಿಗಳು ಈ ಕಡತದಲ್ಲಿದ್ದವು ಎನ್ನಲಾಗಿದೆ.
ಉಭಯ ದೇಶಗಳ ನಡುವೆ ನಡೆದ ಶಾಂತಿ ಒಪ್ಪಂದ ಮತ್ತು ನಂತರ ನಡೆದ ಘಟನಾವಳಿಗಳ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಆದರೆ ಬ್ರಿಟನ್ ಮಾಹಿತಿ ಸಂಗ್ರಹಣಾ ನೀತಿ ಅನುಸಾರವಾಗಿ ಈ 195ಕ್ಕೂ ಹೆಚ್ಚು ಕಡತಗಳನ್ನು ನಾಶಪಡಿಸಲಾಗಿದೆ.
ಆದರೆ ಬ್ರಿಟನ್ ನ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅಂತರಾಷ್ಟ್ರೀಯ ಸಂಬಂಧಗಳ ಕುರಿತ ಅಧ್ಯಯನಕ್ಕೆ ಅನುಕೂಲವಾಗಿದ್ದ ಈ ಕಡತಗಳನ್ನು ನಾಶಪಡಿಸಿದ್ದು ಸರಿಯಲ್ಲ ಎಂದು ಸಂಶೋಧಕರು ಕಿಡಿಕಾರಿದ್ದಾರೆ. 1978 ಮತ್ತು1980 ರಲ್ಲಿ ಎಲ್ ಟಿಟಿಇ ಸಂಭಾವ್ಯ ದಾಳಿ ಕುರಿತು ಬ್ರಿಟನ್ ನ ಗುಪ್ತಚರ ಇಲಾಖೆ ಶ್ರೀಲಂಕಾಗೆ ಮಾಹಿತಿ ನೀಡಿದ್ದು, 1979 ಮತ್ತು 1980ರ ಭಾರತ-ಶ್ರೀಲಂಕಾ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತಾದ ಕಡತಗಳನ್ನು ನಾಶಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.