
ನವದೆಹಲಿ[ಡಿ.03]: ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಒಂದಕ್ಕೆ ಹೋರಾಡಲು ಅಸಾಧ್ಯವಾದರೆ, ಅದು ಭಾರತದ ಸಹಕಾರ ಕೋರಬಹುದು ಎಂದು ನೆರೆಯ ರಾಷ್ಟ್ರಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ‘ಜಮ್ಮು-ಕಾಶ್ಮೀರ ವಿಚಾರವು ಸಮಸ್ಯೆ ಎಂದು ಪರಿಗಣನೆ ಆಗುವುದೇ ಇಲ್ಲ. ಕಾರಣ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಹೀಗಾಗಿ ಆ ವಿಷಯ ಸಂಬಂಧ ಪಾಕ್ ಜೊತೆಗೆ ಯಾವುದೇ ಮಾತುಕತೆಯ ಅವಶ್ಯವಿಲ್ಲ. ಆದರೆ ಭಯೋತ್ಪಾದನೆ ಎಂಬುದು ಒಂದು ಸಮಸ್ಯೆಯಾಗಿದ್ದು, ಈ ಬಗ್ಗೆ ಬೇಕಿದ್ದಲ್ಲಿ ಪಾಕಿಸ್ತಾನ ಚರ್ಚೆ ನಡೆಸಬಹುದು' ಎಂದಿದ್ದಾರೆ.
ಅಲ್ಲದೇ 'ಆಫ್ಘಾನಿಸ್ತಾನದಲ್ಲಿ ಬೇರೂರಿದ ತಾಲಿಬಾನ್ ಸೇರಿದಂತೆ ಇತರ ಭಯೋತ್ಪಾದನೆ ವಿರುದ್ಧ ಅಲ್ಲಿನ ಸರ್ಕಾರ ಅಮೆರಿಕದ ಜೊತೆಗೂಡಿ ಹೋರಾಡುತ್ತದೆ ಎಂದಾದರೆ, ಪಾಕಿಸ್ತಾನ ಒಂದಕ್ಕೆ ಭಯೋತ್ಪಾದನೆ ವಿರುದ್ಧ ಹೋರಾಡಲು ಅಸಾಧ್ಯವೆಂದಾದರೆ, ಭಾರತದ ಸಹಾಯ ಕೋರಬಹುದಲ್ಲವೇ ಎಂದು ಪಾಕಿಸ್ತಾನ ಪ್ರಧಾನಿ ಅವರಿಗೆ ಕೇಳಲು ಬಯಸುತ್ತೇನೆ’ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ