ಕೇರಳದಲ್ಲಿ ಮತ್ತೇ ನಾಳೆಯಿಂದ ಜಲಪ್ರಳಯ : ಹವಾಮಾನ ಇಲಾಖೆ ಮುನ್ಸೂಚನೆ

Published : Oct 01, 2018, 05:14 PM IST
ಕೇರಳದಲ್ಲಿ ಮತ್ತೇ ನಾಳೆಯಿಂದ ಜಲಪ್ರಳಯ : ಹವಾಮಾನ ಇಲಾಖೆ ಮುನ್ಸೂಚನೆ

ಸಾರಾಂಶ

ಈಗ ಅದೇ ರೀತಿಯ ಭಾರಿ ಮಳೆ ನಾಳೆ ಅ.2ರಿಂದ ರಾಜ್ಯದ ಹಲವೆಡೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕೇರಳಕ್ಕೆ ಮುನ್ಸೂಚನೆ ನೀಡಿದೆ. ಅ.5ರ ವರೆಗೂ ಮೂರು ದಿನಗಳ ಕಾಲ 7 ಸೆ.ಮೀ ನಿಂದ 11 ಸೆ.ಮೀ ಸುರಿಯಲಿದೆ.

ತಿರುವನಂತಪುರಂ[ಅ.01]: ಒಂದು ತಿಂಗಳ ಹಿಂದಷ್ಟೆ ಭಾರಿ ಮಳೆ ಹಾಗೂ ಜಲಾಶಯಗಳು ಭರ್ತಿಯ ಕಾರಣದಿಂದ ಇಡೀ ರಾಜ್ಯವೆ ಸಂಕಷ್ಟಕ್ಕೆ ಸಿಲುಕಿತ್ತು. ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು, ಸಾವಿರಾರು ಕೋಟಿ ರೂ. ನಷ್ಟವಾಗಿತ್ತು.

ಈಗ ಅದೇ ರೀತಿಯ ಭಾರಿ ಮಳೆ ನಾಳೆ ಅ.2ರಿಂದ ರಾಜ್ಯದ ಹಲವೆಡೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕೇರಳಕ್ಕೆ ಮುನ್ಸೂಚನೆ ನೀಡಿದೆ. ಅ.5ರ ವರೆಗೂ ಮೂರು ದಿನಗಳ ಕಾಲ 7 ಸೆ.ಮೀ ನಿಂದ 11 ಸೆ.ಮೀ ಸುರಿಯಲಿದೆ. ಅ.5 ರಂದು 12 ರಿಂದ 20 ಸೆ.ಮೀ ವರೆಗೂ ಮಳೆಯಾಗಲಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಅಕ್ಟೋಬರ್ 15ರ ನಂತರ ಕೇರಳಕ್ಕೆ ಈಶಾನ್ಯ ಮುಂಗಾರು ಕೂಡ ಆಗಮಿಸಲಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾರಿ ಮಳೆಯಾಗುವ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಮಾಹಿತಿ ನೀಡಿದ್ದುಅ.6ರ ನಂತರ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ನೀರಿಗಿಳಿದಿದ್ದರೆ ಅ.5ರೊಳಗೆ ವಾಪಸ್ ಆಗಬೇಕು. ಇದರ ಜೊತೆಗೆ ಎಲ್ಲ ಇಲಾಖೆಗಳು ತುರ್ತು ಕ್ರಮ ಕೈಗೊಳ್ಳಲು ಸಜ್ಜಾಗಿರುವಂತೆ ಆದೇಶ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

HD Kumaraswamy birthday: ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!
ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ Congress-BJP ನಡುವೆ ಗದ್ದಲ