
ನವದೆಹಲಿ : ಹೈದರಾಬಾದ್ ಮಹಿಳೆಯನ್ನು ಉತ್ತಮ ಉದ್ಯೋಗ ನೀಡುವುದಾಗಿ ಸೌದಿ ಅರೇಬಿಯಾಗೆ ಕರೆದೊಯ್ದು ಮಹಿಳೆಯನ್ನು ಭಿಕ್ಷೆ ಬೇಡುವಂತೆ ಒತ್ತಡ ಹೇರಲಾದ ಘಟನೆಯು ಬೆಳಕಿಗೆ ಬಂದಿದೆ. ಬಳಿಕ ಅಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನು ಭಾರತೀಯ ರಾಯಭಾರ ಕಚೇರಿ ರಕ್ಷಿಸಿದೆ.
ಸಮೀನಾ ಬೇಗಮ್ ಎಂಬ 29 ವರ್ಷದ ಮಹಿಳೆಯನ್ನು ಉತ್ತಮ ಕೆಲಸದ ಆಮಿಷವೊಡ್ಡಿ ಅಲ್ಲಿಗೆ ಕರೆದೊಯ್ಯಲಾಗಿತ್ತು. ಕೆಲಸ ಕೊಡಿಸುತ್ತೇವೆ ಎಂದು ಕರೆದೊಯ್ದವರೆ ಭಿಕ್ಷೆ ಬೇಡಲು ಆಕೆಗೆ ಒತ್ತಡ ಹೇರಿದ್ದರು.
ಈ ಬಗ್ಗೆ ಮಾತನಾಡಿದ ಮಹಿಳೆಯು ತನ್ನನ್ನು ಕರೆದೊಯ್ದ ಏಜೆಂಟ್ ಉತ್ತಮ ಉದ್ಯೋಗವನ್ನು ಕೊಡಿಸುವುದಾಗಿ ಹೇಳಿದ್ದರು. ತಿಂಗಳಿಗೆ 1000 ರಿಯಲ್ ನೀಡುವ ಭರವಸೆಯನ್ನು ನೀಡಿದ್ದರು.
ಆದರೆ ಅಲ್ಲಿಗೆ ಹೋದ ಮೇಲೆ ತಿಳಿದಿದ್ದೇನೆಂದರೆ ಸೇವಕಿಯಾಗಿ ಒಂದು ಮನೆಯಲ್ಲಿ ಬಿಡಲಾಗಿತ್ತು. ಮೂರು ಮನೆಗಳಲ್ಲಿ ಒಂದೇ ಬಾರಿಗೆ ಎಲ್ಲಾ ಕೆಲಸಗಳನ್ನೂ ನಿರ್ವಹಿಸಬೇಕಿತ್ತು. ಬಳಿಕ ತಾನು ಭಾರತಕ್ಕೆ ಮರಳಿ ಹೋಗುತ್ತೇನೆಂದು ಹೇಳಿದಾಗ ನನ್ನನ್ನು ಬಿಡಲಿಲ್ಲ. ಅಲ್ಲದೇ ಅವರು ಭಿಕ್ಷೆ ಬೇಡುವಂತೆ ತನಗೆ ಒತ್ತಡ ಹೇರುತ್ತಿದ್ದರು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.