ಡಿಕೆಶಿ ಮೇಲೆ ರೇಡ್ ಮಾಡಿದ ಐಟಿ ವಿರುದ್ಧವೇ ದೂರು

Published : Aug 05, 2017, 03:32 PM ISTUpdated : Apr 11, 2018, 12:51 PM IST
ಡಿಕೆಶಿ ಮೇಲೆ ರೇಡ್ ಮಾಡಿದ ಐಟಿ ವಿರುದ್ಧವೇ ದೂರು

ಸಾರಾಂಶ

ಐಟಿ ದಾಳಿಯಿಂದಾಗಿ ಡಿಕೆ ಶಿವಕುಮಾರ್ ತಮ್ಮ ನಿವಾಸದಲ್ಲೇ 3-4 ದಿನ ಇರಬೇಕಾಗಿ ಬಂದಿತು. ಈ ಸಮಯದಲ್ಲಿ ಐಟಿ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸಾ ವೈದ್ಯರನ್ನು ಕರೆತರಲೇ ಇಲ್ಲ. ಮನೆಯ ಬಳಿ ಆ್ಯಂಬುಲೆನ್ಸ್'ನ ನಿಯೋಜನೆಯೂ ಇರಲಿಲ್ಲ. ಸತತ ವಿಚಾರಣೆ ಮೂಲಕ ಡಿಕೆಶಿ ಅವರನ್ನು ಮಾನಸಿಕವಾಗಿ ಹಿಂಸಿಸಿ ತೇಜೋವಧೆ ಮಾಡಲಾಗಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ.

ಬೆಂಗಳೂರು(ಆ. 05): ಡಿಕೆಶಿ ಮೇಲೆ ದಾಳಿ ಮೂರ್ನಾಲ್ಕು ದಿನ ಸಂಪೂರ್ಣ ತಲಾಶ್ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧವೇ ಈಗ ದೂರು ದಾಖಲಾಗಿದೆ. ಐಟಿ ದಾಳಿ ವೇಳೆ ಮಾನವ ಹಕ್ಕುಗಳು ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾನವ ಹಕ್ಕು ಸಮಿತಿ ಸದಸ್ಯ ಮಂಜುನಾಥ ಸ್ವಾಮಿ ಅವರು ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಅವರಿಗೆ ದೂರು ಸಲ್ಲಿಸಿದ್ದಾರೆ.

ಐಟಿ ದಾಳಿಯಿಂದಾಗಿ ಡಿಕೆ ಶಿವಕುಮಾರ್ ತಮ್ಮ ನಿವಾಸದಲ್ಲೇ 3-4 ದಿನ ಇರಬೇಕಾಗಿ ಬಂದಿತು. ಈ ಸಮಯದಲ್ಲಿ ಐಟಿ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸಾ ವೈದ್ಯರನ್ನು ಕರೆತರಲೇ ಇಲ್ಲ. ಮನೆಯ ಬಳಿ ಆ್ಯಂಬುಲೆನ್ಸ್'ನ ನಿಯೋಜನೆಯೂ ಇರಲಿಲ್ಲ. ಸತತ ವಿಚಾರಣೆ ಮೂಲಕ ಡಿಕೆಶಿ ಅವರನ್ನು ಮಾನಸಿಕವಾಗಿ ಹಿಂಸಿಸಿ ತೇಜೋವಧೆ ಮಾಡಲಾಗಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ.

ಸುವರ್ಣನ್ಯೂಸ್ ಜೊತೆ ಮಾತನಾಡಿದ ದೂರುದಾರ ಮಂಜುನಾಥ್ ಸ್ವಾಮಿ, ಐಟಿಯವರು ಕರ್ನಾಟಕದವರ ಮೇಲೆಯೇ ಟಾರ್ಗೆಟ್ ಮಾಡುತ್ತಿದ್ದಾರೆಂದು ಖಂಡಿಸಿದ್ದಾರೆ. ಪ್ರಬಲ ಕಾರಣವಿಲ್ಲದೇ ಯಾವುದೇ ವ್ಯಕ್ತಿಯನ್ನು 3-4 ದಿನ ಸತತವಾಗಿ ಮಾನಸಿಕವಾಗಿ ಹಿಂಸಿಸುವುದು ತಪ್ಪು ಎಂದವರು ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬ್ರೂಣಲಿಂಗ ಪತ್ತೆಕೋರರ ಮಾಹಿತಿ ಕೊಟ್ರೆ ₹1 ಲಕ್ಷ ಬಹುಮಾನ! ಮಹತ್ವದ ಘೋಷಣೆ
ಡಿಎಂಕೆ ಸರ್ಕಾರದ ಪತನಕ್ಕೆ ಕ್ಷಣಗಣನೆ, ಚಿನ್ನ ಕಳ್ಳರು ಜೈಲಿಗೆ: ಪ್ರಧಾನಿ ಮೋದಿ ಗುಡುಗು