ಬಾವಲಿಗಳ ವಾಸಸ್ಥಾನ ನಾಶವೇ ನಿಫಾ ವೈರಸ್‌ಗೆ ಕಾರಣ: ವರದಿ

Published : May 24, 2018, 10:05 AM IST
ಬಾವಲಿಗಳ ವಾಸಸ್ಥಾನ ನಾಶವೇ ನಿಫಾ ವೈರಸ್‌ಗೆ ಕಾರಣ: ವರದಿ

ಸಾರಾಂಶ

ಕೇರಳದಲ್ಲಿ ನಿಫಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈ ಸಮಸ್ಯೆ ಎದುರಾಗಿರುವುದಕ್ಕೆ ಮಾನವನೇ ಕಾರಣ ಎಂಬ ಅಂಶಗಳನ್ನು ತಜ್ಞರು ಬಹಿರಂಗ ಪಡಿಸಿದ್ದಾರೆ. ಬಾವಲಿಗಳಿಂದ ಹರಡುವ ಈ ಕಾಯಿಲೆಗೆ ಕಾರಣ, ಬಾವಲಿಗಳ ವಾಸಸ್ಥಾನ ನಾಶ ಮತ್ತು ಹವಾಮಾನ ಬದಲಾವಣೆ ಕಾರಣ ಎಂದು ಜಾಗತಿಕ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.

ಕೊಚ್ಚಿ: ಕೇರಳದಲ್ಲಿ ನಿಫಾ ವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈ ಸಮಸ್ಯೆ ಎದುರಾಗಿರುವುದಕ್ಕೆ ಮಾನವನೇ ಕಾರಣ ಎಂಬ ಅಂಶಗಳನ್ನು ತಜ್ಞರು ಬಹಿರಂಗ ಪಡಿಸಿದ್ದಾರೆ. ಬಾವಲಿಗಳಿಂದ ಹರಡುವ ಈ ಕಾಯಿಲೆಗೆ ಕಾರಣ, ಬಾವಲಿಗಳ ವಾಸಸ್ಥಾನ ನಾಶ ಮತ್ತು ಹವಾಮಾನ ಬದಲಾವಣೆ ಕಾರಣ ಎಂದು ಜಾಗತಿಕ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.

ಬಾವಲಿ ಸಂಬಂಧಿತ ವೈರಲ್‌ ಸೋಂಕಿನಿಂದ ಹರಡುತ್ತಿರುವ ರೋಗಕ್ಕೆ ಪ್ರಾಣಿಗಳ ನೈಸರ್ಗಿಕ ವಾಸಸ್ಥಾನಗಳು ನಾಶವಾಗಿರುವುದೇ ಕಾರಣ ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿವೆ ಎಂದು ವರದಿ ಪ್ರತಿಪಾದಿಸಿದೆ. ಮಾನವನ ಚಟುವಟಿಕೆಗಳಿಂದಾಗಿ ಬಾವಲಿಗಳ ವಾಸಸ್ಥಾನ ನಾಶವಾಗಿರುವರಿಂದ, ಅವುಗಳು ಹಸಿವಿನಿಂದ ಒತ್ತಡಕ್ಕೊಳಗಾಗುತ್ತಿವೆ. ಅವುಗಳ ರೋಗ ನಿರೋಧಕ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ಹೀಗಾಗಿ ಅವುಗಳ ವೈರಸ್‌ ಪ್ರಮಾಣ ಏರಿಕೆಯಾಗಿ, ತುಂಬಾ ವೈರಸ್‌ ಅವುಗಳ ಮೂತ್ರ ಮತ್ತು ಜೊಲ್ಲುರಸದಲ್ಲಿ ಹೊರಸೂಸುತ್ತದೆ ಎಂದು ವರದಿ ತಿಳಿಸಿದೆ.

ನಿಫಾ ವೈರಸ್‌ ಹರಡುವಿಕೆಯಲ್ಲಿ ಸಂತಾನೋತ್ಪತ್ತಿ ಮತ್ತು ಹಸಿವಿನ ಸಮಸ್ಯೆ ಪ್ರಮುಖವಾದುದು. ಬಾಂಗ್ಲಾದೇಶದಲ್ಲಿ ನಿಫಾ ವೈರಸ್‌ ಸಮಸ್ಯೆ ಉದ್ಭವಾಗಿದ್ದಾಗ ಕೆನಡಾದ ಸಸ್ಕಾಚೆವನ್‌ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ಅಂಶಗಳು ತಿಳಿದುಬಂದಿವೆ ಎಂದು ವರದಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರತಿಭಾವಂತ ವಿದ್ಯಾರ್ಥಿನಿ ಪ್ರಿಯಾಂಕಾ ಇನ್ನಿಲ್ಲ; ಹೊಟ್ಟೆನೋವು ತಾಳಲಾರದೇ ಆತ್ಮ*ಹತ್ಯೆ!
ಹೊಸ ವರ್ಷ 2026ಕ್ಕೆ ಕೆಲವೇ ದಿನ, 2025ರಲ್ಲಿ ದೇಶಮಟ್ಟದಲ್ಲಿ ಸುದ್ದಿಯಾದ ಬೆಂಗಳೂರಿನ ಅಪರಾಧ ಲೋಕದ ಕರಾಳ ಅಧ್ಯಾಯಗಳಿವು!