
ಬೆಂಗಳೂರು (ಜೂ. 05): ಕಳೆದ ವಾರ ರಾಹುಲ್ ಗಾಂಧಿ ಮನೆಯಿಂದ ಹೊರಗಡೆ ಬಂದಾಗ ಸಿದ್ದು, ಖರ್ಗೆ, ಪರಮೇಶ್ವರ್ ಅವರು ಮಾಧ್ಯಮದವರಿಗೆ ಹಲೋ ಕೂಡ ಹೇಳದೆ ಹಾಗೇ ಹೋಗಿದ್ದರು. ಆದರೆ, ಪತ್ರಕರ್ತರನ್ನು ನೋಡಿದ ಕೂಡಲೇ ಕಾರು ನಿಲ್ಲಿಸಿ ಕೆಳಗಿಳಿದ ಡಿ ಕೆ ಶಿವಕುಮಾರ್, ದೇವೇಗೌಡರ ಕುಟುಂಬದ ಜೊತೆ ಹೋಗಬೇಕು ಎಂದು ಹೈಕಮಾಂಡ್ ಹೇಳಿತ್ತು, ಹಾಗಾಗಿ ಹೋಗಿದ್ದೇವೆ ಎಂದು ಹೇಳುವ ರೀತಿಯಲ್ಲಿಯೇ ಏನೋ ಇಂಗಿತ ಕಾಣಿಸುತ್ತಿತ್ತು.
ಏನೇ ಆಗಲಿ ಮಾಡಿದ ಸಹಾಯಕ್ಕೆ ದೇವೇಗೌಡರ ಕುಟುಂಬ ಇಂಧನ ಇಲಾಖೆ ಕೇಳಲಿಕ್ಕಿಲ್ಲ ಎಂದು ಶಿವಕುಮಾರ್ ಅಂದುಕೊಂಡಿದ್ದರಂತೆ. ಆದರೆ ಯಾವಾಗ ಗುಲಾಂ ನಬಿ ಆಜಾದ್ರ ಮನೆಗೇ ಬಂದು ಕುಮಾರಸ್ವಾಮಿ ಮತ್ತು ರೇವಣ್ಣ ‘ಇಂಧನ’ ನಮಗೆ ಬೇಕು ಅಂದರೋ ಆಗ ಸಂಜೆ ಕರ್ನಾಟಕ ಭವನಕ್ಕೆ ಮರಳಿದ ಡಿಕೆಶಿ ಶಿಷ್ಯಂದಿರು, ‘ಏನ್ ಸಾರ್, ನಮ್ಮ ಸಾಹೇಬರಿಗೇ ಹಿಂಗಾಗೋಯ್ತು, ದೇವೇಗೌಡರ ಮಕ್ಕಳು ನೋಡಿ... ಇಷ್ಟೆಲ್ಲಾ ಸಹಾಯ ಮಾಡಿದ್ರೂ ಇಂಧನ ನಮಗೆ ಬೇಕು ಅಂತಾರೆ. ಸಾಹೇಬರು ಭಾಳಾನೇ ಬೇಜಾರಾಗಿದ್ದಾರೆ ಸಾರ್’ ಎಂದು ಹೇಳಿಕೊಳ್ಳುತ್ತಿದ್ದರು.
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ವಿಶೇಷ ಪ್ರತಿನಿಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.